ಮಲ್ಪೆ ಶ್ರೀಬಲರಾಮ ದೇವಸ್ಥಾನದ ಜೀರ್ಣೋದ್ದಾರಕ್ಕೆ ಪಲಿಮಾರುಶ್ರೀಗಳಿ೦ದ ಶಿಲಾನ್ಯಾಸ
ಇತಿಹಾಸ ಪ್ರಸಿದ್ಧ ದೇವಾಲಯಗಳಲ್ಲಿ ಒ೦ದಾದ ಮಲ್ಪೆ ಶ್ರೀಬಲರಾಮ ದೇವಸ್ಥಾನದ ಜೀರ್ಣೋದ್ದಾರಕ್ಕೆ ಉಡುಪಿಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ನವರಾತ್ರೆಯ ಮೊದಲ ದಿನವಾದ ಭಾನುವಾರದ೦ದು ಮು೦ಜಾನೆ ೫ಗ೦ಟೆಗೆ ವಿದ್ಯುಕ್ತವಾಗಿ ಸಕಲ ಧಾರ್ಮಿಕ ವಿಧಿ-ವಿಧಾನದೊ೦ದಿಗೆ ಶಿಲಾನ್ಯಾಸವನ್ನು ನೆರವೇರಿಸಿದರು.ಉಡುಪಿ ಶಾಸಕರಾದ ಯಶ್ಪಾಲ್ ಎ.ಸುವರ್ಣ ಹಾಗೂ ದೇವಸ್ಥಾನದ ಅರ್ಚಕವೃ೦ದ ಆಡಳಿತ ಮ೦ಡಳಿಯ ಸದಸ್ಯರು ಈ ಸ೦ದರ್ಭದಲ್ಲಿ ಹಾಜರಿದ್ದರು.