ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಲಕ್ಷಾ೦ತರ ಭಕ್ತ ಜನಸ್ತೋಮದ ನಡುವೆ ಉಡುಪಿಯಲ್ಲಿ “ಶ್ರೀಕೃಷ್ಣಜನ್ಮಾಷ್ಟಮಿ”ಲೀಲೋತ್ಸವ ಸ೦ಪನ್ನ…

ಉಡುಪಿ: ಶ್ರೀಕೃಷ್ಣ ಜನ್ಮೋತ್ಸವದ ಸಡಗರ ಸಂಭ್ರಮದ ಕುರುಹಾಗಿ ವಿಟ್ಲಪಿಂಡಿ (ಮೊಸರುಕುಡಿಕೆ) ಮಹೋತ್ಸವ ಗುರುವಾರ ಕೃಷ್ಣಮಠದಲ್ಲಿ ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸಾಂಪ್ರದಾಯಿಕ ಸಡಗರ ಉತ್ಸಾಹದಿಂದ ಸಂಭ್ರಮದಿಂದ ನೆರವೇರಿತು.

ಪರ್ಯಾಯ ಶ್ರೀಪಾದರು ಶ್ರೀಕೃಷ್ಣನಿಗೆ ವಜ್ರಕವಚ ಅಲಂಕಾರ ಮಾಡಿದ್ದರು.ಬೆಳಗ್ಗಿನ ಮಹಾಪೂಜೆ ಬಳಿಕ ಪಲ್ಲಪೂಜೆ ನಡೆದು ಭಕ್ತಾದಿಗಳಿಗೆ ಭೋಜನ ಪ್ರಸಾದ ವಿತರಿಸಲಾಯಿತು.

ಅದಾಗಲೇ ಪ್ರತ್ಯೇಕ ರಥದಲ್ಲಿ ಅನಂತೇಶ್ವರ- ಚಂದ್ರೇಶ್ವರ ದೇವರು ರಥಾರೂಢರಾಗಿದ್ದು, ಚಿನ್ನದ ರಥದಲ್ಲಿ ಮೃಣ್ಮಯ ಕೃಷ್ಣಮೂರ್ತಿಯನ್ನಿರಿಸಲಾಯಿತು. ಪರ್ಯಾಯ ಶ್ರೀಪಾದರು ಆರತಿ ಬೆಳಗಿದ ತರುವಾಯ ರಥೋತ್ಸವ ಆರಂಭಗೊಂಡಿತು.
ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಮತ್ತು ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉತ್ಸವದಲ್ಲಿ ಭಾಗವಹಿಸಿದ್ದರು.

ಗೊಲ್ಲ ವೇಷಧಾರಿಗಳಾಗಿ ಸಿದ್ಧರಾಗಿದ್ದ ಶ್ರೀಮಠದ ಗೋವಳರು ಅದಾಗಲೇ ರಥಬೀದಿಯ ಸುತ್ತಲೂ ನಿರ್ಮಿಸಿದ್ದ ಗುರ್ಜಿಗಳಲ್ಲಿ ಹಾಲು ಮೊಸರು ಬಣ್ಣದ ನೀರು ತುಂಬಿದ ಮಡಿಕೆಗಳನ್ನು ಒಡೆದು ಸಂಭ್ರಮಿಸಿದರು.ಲಕ್ಷಾ೦ತರ ಜನರು ಈ ಉತ್ಸವದಲ್ಲಿ ಭಾಗವಹಿಸಿದ್ದರು.

kiniudupi@rediffmail.com

No Comments

Leave A Comment