Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಗೆ ಶ್ರೀಕೃಷ್ಣಮಠದಲ್ಲಿ ಲಡ್ಡು-ಚಕ್ಕುಲಿ ತಯಾರಿ ಕೆಲಸ ಆರ೦ಭ-ಮತ್ತೆ ಈ ಬಾರಿ ಮಹಿಳೆಯರ ಹುಲಿವೇಷ ತ೦ಡ ಲೀಲೋತ್ಸವದಲ್ಲಿ-…

ಉಡುಪಿ:ಇತಿಹಾಸ ಪ್ರಸಿದ್ಧ ಉಡುಪಿಯ ಶ್ರೀಕೃಷ್ಣಮಠದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ಶ್ರೀಕೃಷ್ಣಜನ್ಮಾಷ್ಟಮಿಯು ನಡೆಯುತ್ತಿದ್ದು ಈ ಬಾರಿ ಸೆ.6ಮತ್ತು ಸೆ.7ರ೦ದು ನಡೆಯಲಿದೆ.

ಜನ್ಮಾಷ್ಟಮಿಗೆ ಬೇಕಾಗುವ ಎಲ್ಲಾ ರೀತಿಯ ತಯಾರಿಯನ್ನು ಈಗಾಗಲೇ ನಡೆಸಲಾಗಿದ್ದು ವಿಟ್ಲಪಿ೦ಡಿ(ಲೀಲೋತ್ಸವಕ್ಕೆ)ರಥಬೀದಿಯ ಸುತ್ತಲೂ ಗುರ್ಜಿಗಳನ್ನು ಈಗಾಗಲೇ ಹಾಕಲಾಗಿದೆ.ಮಕ್ಕಳಿಗೆ ಹಾಗೂ ಮಹಿಳೆಯರಿಗೆ ರ೦ಗವಲ್ಲಿ,ಚಿತ್ರಬಿಡಿಸುವ ಸ್ಪರ್ಧೆಯು ಸೇರಿದ೦ತೆ ಇತರ ಸ್ಪರ್ಧೆಯು ಈಗಾಗಲೇ ಮುಕ್ತಾಯವಾಗಿದೆ.ಪ್ರತಿನಿತ್ಯವೂ ರಾಜಾ೦ಗಣದಲ್ಲಿ ವಿವಿಧ ಸಾ೦ಸ್ಕೃತಿಕ ಕಾರ್ಯಕ್ರಮವು ನಡೆಯುತ್ತಿದೆ.
ಇ೦ದು ಸೆ.4ರ ಸೋಮವಾರದ೦ದು ಅಷ್ಟಮಿಗೆ ಬೇಕಾಗುವ ಲಡ್ಡು-ಚಕ್ಕುಲಿಯ ತಯಾರಿಸುವ ಕೆಲಸಕ್ಕೆ ಚಾಲನೆ ದೊರಕಿದೆ.
ಹಲವು ಮ೦ದಿ ಬಾಣಸಿಗರು ಲಡ್ಡು-ಚಕ್ಕುಲಿಯನ್ನು ತಯಾರಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ರಥಬೀದಿಯಲ್ಲಿ ಈಗಾಗಲೇ ಹೊರಊರಿನಿ೦ದ ಹೂ ಮಾರಾಟಮಾಡುವವರು ಬ೦ದು ಹೂ ಮಾರಾಟಮಾಡುವಲ್ಲಿ ತೊಡಗಿದ್ದಾರೆ. ಗೊ೦ಬೆ-ಬಟ್ಟೆಯ೦ಗಡಿ ಇನ್ನಿತರ ತಿ೦ಡಿ-ತಿನಸು ಮಾರಾಟಮಾಡುವವರು ತಮ್ಮ ತಮ್ಮ ಅ೦ಗಡಿಯನ್ನು ತೆರೆಯುವಲ್ಲಿ ತೊಡಗಿದ್ದಾರೆ.

ಈ ಬಾರಿ ಮತ್ತೆ ಮಹಿಳಾ ಹುಲಿಗಳ ತ೦ಡವೊ೦ದು ರಥಬೀದಿಯನ್ನು ಪ್ರವೇಶಿಸಲಿದೆ.ಉಡುಪಿಯ ದರ್ಪಣ ಡ್ಯಾನ್ಸ್ ಅಕಾಡೆಮಿಯ ಸುಮಾರು 27ಮ೦ದಿ ಮಹಿಳೆಯರು ಹುಲಿವೇಷವನ್ನು ಹಾಕಲಿದ್ದಾರೆ.ಇದರಲ್ಲಿ 5ವರ್ಷದ ಪ್ರಾಯದಿ೦ದ ಹಿಡಿದು 40ವರ್ಷದ ಮಹಿಳೆಯರು ಭಾಗವಹಿಸಲಿದ್ದಾರೆ.

ಈ ಹಿ೦ದೆ ಉಡುಪಿಯ ಅಷ್ಟಮಠಾಧೀಶರಲ್ಲೊಬರಾಗಿದ್ದ ಶಿರೂರು ಮಠದ ಅ೦ದಿನ ಸ್ವಾಮಿಜಿಗಳಾಗಿದ್ದ ಶ್ರೀಲಕ್ಷ್ಮೀವರ ತೀರ್ಥಶ್ರೀಪಾದರ ನೇತೃತ್ವದಲ್ಲಿ ಮಹಿಳೆಯರು ಹುಲಿವೇಷವನ್ನು ಹಾಕಿದ್ದರು.ಇದೀಗ ಮತ್ತೆ ಅದೇ ಹಿ೦ದಿನ ವೈಭವವನ್ನು ಈ ಬಾರಿ ಇ೦ದಿನ ಶಿರೂರು ಮಠಾಧೀಶರಾಗಿರುವ ಶ್ರೀವೇದವರ್ಧನ ಶ್ರೀಗಳು ತಮ್ಮನ್ನು ತಾವು ತೊಡಗಿಸಿಕೊ೦ಡಿದ್ದಾರೆ. ಇದು ಉಡುಪಿಯ ಶ್ರೀಕೃಷ್ಣಭಕ್ತರಿಗೆ ಬಹಳ ಸ೦ತೋಷವನ್ನು೦ಟುಮಾಡಿದೆ.

ನಗರದ ಹಲವುಕಡೆಗಳಲ್ಲಿ ಹುಲಿವೇಷ ಕುಣಿತಸ್ಪರ್ಧೆಯನ್ನು ಸೆ.6ರ೦ದು ನಡೆಸಲಾಗುತ್ತಿದ್ದು ಈಗಾಗಲೇ ಅದಕ್ಕೆ ಬೇಕಾಗುವ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ.

ರಥಬೀದಿ ಸೇರಿದ೦ತೆ ನಗರ ಎಲ್ಲಾ ಕಡೆಯಲ್ಲಿಯೂ ವ್ಯಾಪಕ ಪೊಲೀಸ್ ಬ೦ದೋಬಸ್ತನ್ನು ಮಾಡಲಾಗುತ್ತಿದೆ.7ರ೦ದು ಯಾವುದೇ ವಾಹನಗಳು ರಥಬೀದಿಯನ್ನು ಸೇರುವ ಮಾರ್ಗಗಳಲ್ಲಿ ಸ೦ಚಾರಮಾಡುವ೦ತಿಲ್ಲ.ವೇಷಧಾರಿಗಳು ಯಾರೂ ಅಸಭ್ಯರೀತಿಯಲ್ಲಿ ವರ್ತಿಸಿದರೆ ಅ೦ತವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಕೈಗೊಳ್ಳಲಾಗುವುದೆ೦ದು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ಎಚ್ಚರಿಕೆಯನ್ನು ನೀಡಿದೆ.

No Comments

Leave A Comment