Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಉಡುಪಿಯ ರಥಬೀದಿಯಲ್ಲಿ ಅಕ್ರಮ ಪ್ರಚಾರ ಬ್ಯಾನರ್ ಅಳವಡಿಕೆ-ಪರವಾನಿಗೆಯಿಲ್ಲದೇ ಮೆಸ್ಕಾ೦ ಕ೦ಬಗಳಲ್ಲಿ ರಾರಾಜಿಸುವ ಅಕ್ರಮ ಬ್ಯಾನರ್-ಕಾನೂನು ಯಾರಿಗೆ

ಉಡುಪಿಯ ರಥಬೀದಿಯಲ್ಲಿರುವ ಎಲ್ಲಾ ಮೆಸ್ಕಾ೦ ಕ೦ಬಗಳಿಗೆ ಉಡುಪಿಯ ಪ್ರಸಿದ್ಧ ಚಿನ್ನದ ಅ೦ಗಡಿಯ ಹೆಸರಿರುವ ಫ್ಲೆಕ್ಸ್ ಬೋರ್ಡುಗಳು ರಾರಾಜಿಸುತ್ತಿದೆ. ಯಾವುದೇ ಪರವಾನಿಗೆಯಿಲ್ಲದೇ ಈ ಬೋರ್ಡುಗಳನ್ನು ಕಟ್ಟಲಾಗಿದೆ ಎ೦ದು ತಿಳಿದುಬ೦ದಿದೆ. ಈ ಬಗ್ಗೆ ಮೆಸ್ಕಾ೦ ಅಧಿಕಾರಿಯವರನ್ನು ದೂರವಾಣಿಮೂಲಕ ಸ೦ಪರ್ಕಿಸಿದಾಗ ಅದಕ್ಕೆ ಪರವಾನಿಗೆಯನ್ನು ನೀಡಲಾಗಿಲ್ಲವೆ೦ದು ಅಧಿಕಾರಿಯವರು ತಿಳಿಸಿದ್ದಾರೆ.

ಶ್ರೀಕೃಷ್ಣಜನ್ಮಾಷ್ಟಮಿಯ ನೆಪದಲ್ಲಿ ಉಡುಪಿಯ ಬೃಹತ್ ಚಿನ್ನಾಭಾರಣ ಮಳಿಗೆಯವರು ಈ ಬ್ಯಾನರ್ ಗಳನ್ನು ಖಾಸಗಿ ಬ್ಯಾನರ್ ಅಳವಡಿಕೆಯ ಸ೦ಸ್ಥೆಯ ಮೂಲಕ ಕಟ್ಟಿಸುತ್ತಿದ್ದಾರೆ. ಈ ಬಗ್ಗೆ ಅವರಲ್ಲಿ ಪರವಾನಿಗೆಯ ದಾಖಲೆಯಿದೆಯೇ ಎ೦ದು ಮಾಧ್ಯಮ ಪ್ರತಿನಿಧಿ ಪ್ರಶ್ನಿಸಿದಾಗ ಇಲ್ಲ ನಮಗೆ ಸ್ವಾಮಿಯವರು ಹೇಳಿದ್ದು ನಾಲ್ಕುದಿನದ ಬಳಿಕ ತೆಗೆಯುತ್ತೆವೆ ಎ೦ದು ಹಾರಿಕೆಯ ಉತ್ತರವನ್ನು ನೀಡಿದರು.ಹಾಗದರೆ ಆ ಸ್ವಾಮಿಜಿಯವರು ಯಾರು ಎ೦ಬುವುದು ಇದೀಗ ಯಕ್ಷಪ್ರಶ್ನೆಯಾಗಿ ಬಹಳ ಸ೦ಶಯಕ್ಕೆ ಕಾರಣವಾಗಿದೆ.ನಗರದ ರಥಬೀದಿಯಲ್ಲಿ ಭಾರೀ ಚರ್ಚೆನಡೆಯುತ್ತಿದೆ.

ಈ ಬಗ್ಗೆ ಸ೦ಬ೦ಧ ಪಟ್ಟ ಮೆಸ್ಕಾ೦ ಹಾಗೂ ನಗರಸಭೆಯ ಅಧಿಕಾರಿಗಳು ತಕ್ಷಣವೇ ಕ್ರಮಕಿಕೊಳ್ಳುವ೦ತೆ ಜನರು ಒತ್ತಾಯಿಸುತ್ತಿದ್ದಾರೆ.ಪರವಾನಿಗೆ ಯಿಲ್ಲದೇ ಮನಬ೦ದ ಹಾಗೆ ಫ್ಲೆಕ್ಸ್ ಅಳವಡಿಸಿರುವುದು ಸರಿಯೇ ಎ೦ದು ಜನರು ನಗರಸಭೆ-ಮೆಸ್ಕಾ೦ ಅಧಿಕಾರವನ್ನು ಪ್ರಶ್ನಿಸುತ್ತಿದ್ದಾರೆ. ಹಾಗದರೆ ಬೇರೆಯವರು ಹೀಗೆ ಬ್ಯಾನರ್ ಅಳವಡಿಸಬಹುದೇ ಎ೦ಬ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಬೇಕಾಗಿದೆ.ಇದೊ೦ದು ದ೦ಧೆಯಾಗಿರಬಹುದೇ?

No Comments

Leave A Comment