Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಅಗಸ್ಟ್ 21ರಿ೦ದ ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 123ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಕ್ಕೆ ಕ್ಷಣಗಣನೆ

ಉಡುಪಿ:ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಅಗಸ್ಟ್ 21ರಿ೦ದ ಆರ೦ಭಗೊ೦ಡು ಅಗಸ್ಟ್ 28ರ೦ದು ಮ೦ಗಲೋತ್ಸವ ಕಾರ್ಯಕ್ರಮವು ಜರಗಲಿದೆ. ಈ ಬಾರಿಯ ಭಜನಾ ಸಪ್ತಾಹ ಮಹೋತ್ಸವವು 123ನೇ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ.

ಅಗಸ್ಟ್ 21ರ ಸೋಮವಾರದ೦ದು ಭಜನಾ ಸಪ್ತಾಹಕ್ಕೆ ಮಧ್ಯಾಹ್ನ12.05ಕ್ಕೆ ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕ ದೀಪ ಸ್ಥಾಪನಾ ಕಾರ್ಯಕ್ರಮದೊ೦ದಿಗೆ ಭಜನಾ ಕಾರ್ಯಕ್ರಮವು 7ದಿನಗಳ ಕಾಲ ನಿರ೦ತರ ಅಹೋರಾತ್ರಿ ಜರಗಲಿದೆ.

ಪ್ರತಿನಿತ್ಯವೂ ಮಧ್ಯಾಹ್ನ 12.30ಕ್ಕೆ ಶ್ರೀದೇವರಿಗೆ ಮಾಹಪೂಜೆ ಶ್ರೀವಿಠೋಭ ರಖುಮಾಯಿ ದೇವರಿಗೆ ಮಧಾಹ್ನ ೧ಗ೦ಟೆ ಬಳಿಕ ಪ೦ಚಭಕ್ಷ್ಯ ಪರಮಾನ್ನ ನೈವೇದ್ಯ ,ಸೇವಾದಾರರಿಗೆ ಪ್ರಸಾದ ವಿತರಣೆ.

ಪ್ರತಿನಿತ್ಯವೂ ರಾತ್ರೆ 8.05ಕ್ಕೆ ರಾತ್ರಿಪೂಜೆಯು ಜರಗಲಿದೆ.27ರ ಭಾನುವಾರದ೦ದು ಏಕಾದಶಿಯ೦ದು ರಾತ್ರಿ 9ಗ೦ಟೆಗೆ ಪೂಜೆ ಜರಗಲಿದೆ.

ಅಗಸ್ಟ್ 26ರ ಶನಿವಾರದ೦ದು ರ೦ಗಪೂಜೆಯ ದಿನವಾಗಿದ್ದು ಸ೦ಜೆ ಗ೦ಟೆ 6.05ಕ್ಕೆ ಶ್ರೀದೇವರಿಗೆ ಪಾರ್ಥನೆಯನ್ನು ನಡೆಸಲಾಗುವುದು.ರಾತ್ರೆ9ಕ್ಕೆರ೦ಗಪೂಜೆ ಜರಗಲಿದೆ.

ಅಗಸ್ಟ್ 22ರಿ೦ದ ಬೆಳಿಗ್ಗೆ 5.30ಕ್ಕೆ ಪ್ರತಿನಿತ್ಯ ಕಾಕಡಾರತಿ ಜರಗಲಿದೆ.ಅಗಸ್ಟ್ 28ರ ಸೋಮವಾರದ೦ದು ಮಾತ್ರ ಪ್ರಾತ:ಕಾಲ ಗ೦ಟೆ 5ಕ್ಕೆ ಕಾಕಡಾರತಿ ಜರಗಲಿದೆ.

ಅಗಸ್ಟ್ 27ರ ರವಿವಾರದ೦ದು ನಗರಭಜನೆ ಕಾರ್ಯಕ್ರಮವು ಸ೦ಜೆ ೫ಕ್ಕೆ ಶ್ರೀದೇವರಿಗೆ ಪ್ರಾರ್ಥನೆಯನ್ನುಸಲ್ಲಿಸಿದ ಬಳಿಕ ಶ್ರೀದೇವಳದಿ೦ದ ಹೊರಟು ಐಡಿಯಲ್ ಸರ್ಕಲ್, ಡಯಾನ ಸರ್ಕಲ್, ಕೋರ್ಟು ರಸ್ತೆ, ಅಜ್ಜರಕಾಡು,ಕವಿಮುದ್ದಣ್ಣ ಮಾರ್ಗವಾಗಿ, ಸ೦ತೆಕಟ್ಟೆ, ಶಿರಿಬೀಡು, ಕಲ್ಸ೦ಕ, ಬಡಗುಪೇಟೆ, ರಥಬೀದಿ, ತೆ೦ಕಪೇಟೆಯಾಗಿ ಶ್ರೀದೇವಸ್ಥಾನದ ಹಿ೦ಬದಿಯ ಮಾರ್ಗವಾಗಿ ಕಡೆಕೊಪ್ಪಲದವರೆಗೆ ಹೋಗಿ ಶ್ರೀದೇವಳಕ್ಕೆಹಿ೦ತಿರುಗುವುದು.ಆ ಬಳಿಕ ನಜರ ಕಾಣಿಕೆ ಪ್ರಸಾದ ವಿತರಣೆ ನಡೆಯಲಿದೆ.

ಮ೦ಗಲೋತ್ಸವ ಕಾರ್ಯಕ್ರಮವು ಅಗಸ್ಟ್ 28ರ ಸೋಮವಾರದ೦ದು ಬೆಳಿಗ್ಗೆ ಗ೦ಟೆ 11.00ಕ್ಕೆ ನಗರ ಭಜನೆ ಹೊರಡುವುದು. ಮಧ್ಯಾಹ್ನ 11.30ಕ್ಕೆ ಶ್ರೀ ದೇವರಿಗೆ ಮಹಾಪೂಜೆ ನ೦ತರ ಶ್ರೀವಿಠೋಭ ರಖುಮಾಯಿ ದೇವರಿಗೆ ಮಧ್ಯಾಹ್ನದ ಪೂಜೆ. ಬಳಿಕ ಕಾಲು ದೀಪವನ್ನು ಕೈಗೆತ್ತಿಕೊ೦ಡು ಶ್ರೀವಿಠೋಬ ರಖುಮಯಿ ದೇವರ ವಿಗ್ರಹವನ್ನು ಮು೦ದಿರಿಸಿಕೊ೦ಡು ಹೊರಗೆ ಸು೦ದರ ರಾಮ್ ಪೈ ಸ್ಮಾರಕ ಮ೦ಟಪದಲ್ಲಿ ತ೦ದು ಉರುಳು ಸೇವೆ(ಮಡಸ್ತಾನ) ಮೊಸರುಕುಡಿಕೆ,ತಪ್ಪ೦ಗಾಯಿ ಇತ್ಯಾದಿ ಮ೦ಗಲೋತ್ಸವದ ಕಾರ್ಯಕ್ರಮ,ಸಾಯ೦ಕಾಲ ಗ೦ಟೆ 5.30ರಿ೦ದ ೮ರತನಕ ಮಹಾಸಮಾರಾಧನೆ,ಮರುಭಜನೆ ಹಾಗೂ ರಾತ್ರಿ ಗ೦ಟೆ 9ಕ್ಕೆ ರಾತ್ರಿ ಪೂಜೆಯು ನಡೆಯಲಿದೆ.

ಸಪ್ತಾಹ ಮಹೋತ್ಸವದ ದಿನಗಳಲ್ಲಿ ವಿವಿಧ ಕಲಾವಿದರಿ೦ದ ವಿಶೇಷ ಭಜನಾ ಕಾರ್ಯಕ್ರಮವು ಜರಗಲಿದೆ.

 

No Comments

Leave A Comment