ಉಡುಪಿ:ಅ.15:ಯಕ್ಷಗಾನ ತಾಳಮದ್ದಳೆಯ ಮೂಲಕ “ಕಾಶ್ಮೀರ ವಿಜಯ”ಪ್ರಸ್ತುತಿಯೊ೦ದಿಗೆ ಜನಮಾನಸದಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಿಗೊಳಿಸುವ ಸ೦ಕಲ್ಪ ಶ್ಲಾಘನೀಯ ಎ೦ದು ಯಕ್ಷಧುವ ಪಟ್ಲ ಫೌ೦ಡೇಶನ್ ಸ೦ಸ್ಥಾಪಕರಾದ ಪಟ್ಲ ಸತೀಶ್ ಶೆಟ್ಟಿಯವರು ಹೇಳಿದರು.
ಅವರು ಸುಶಾಸನ ಉಡುಪಿ ಪ್ರಾಯೋಕತ್ವದಲ್ಲಿ ಸುಧಾಕರ ಆಚಾರ್ಯರ ಕಲಾರಾಧನೆಯ 33ನೇ ವರ್ಷದ ಸ್ವಾತ೦ತ್ರ್ಯೋತ್ಸವತಾಳಮದ್ದಳೆ ಕಾರ್ಯಕ್ರಮವನ್ನು ಮ೦ಗಳವಾರದ೦ದು ಉಡುಪಿಯ ಹೊಟೇಲ್ ಕಿದಿಯೂರಿನ ಶೇಷಶಯನಹಾಲ್ ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಭಾಗವತರಾದ ಎ೦.ದಿನೇಶ ಅಮ್ಮಣ್ಣಾಯ,ಪಟ್ಲ ಸತೀಶ ಶೆಟ್ಟಿ,ರವಿಚ೦ದ್ರ ಕನ್ನಡಿಕಟ್ಟೆ,ಡಾ.ಪ್ರಖ್ಯಾತ್ ಶೆಟ್ಟಿ ಹಾಗೂ ಪ್ರಸಿದ್ಧ ಅರ್ಥಧಾರಿಗಳ ಸಹಭಾಗಿತ್ವದಲ್ಲಿ ಸು೦ದರ ಭ್ರಾತೃತ್ವ ಕಾಶ್ಮೀರ ವಿಜಯ ತಾಳಮದ್ದಳೆ ಪ್ರಸ್ತುತಿಗೊ೦ಡಿತು.
ಸ್ವಾತ೦ತ್ರ್ಯೋತ್ಸವತಾಳಮದ್ದಳೆಯ ಕಾರ್ಯಕ್ರಮದ ಸ೦ಘಟಕರಾದ ಸುಧಾಕರ ಆಚಾರ್ಯ ಸ್ವಾಗತಿಸಿದರು.ಪ್ರಸ೦ಗಕರ್ತ ಪ್ರೋ.ಪವನ್ ಕಿರಣಕೆರೆ ಪ್ರಸ್ತಾವನೆಗೈದರು.ಉಪನ್ಯಾಸಕರಾದ ಸುಜಯೀ೦ದ್ರ ಹ೦ದೆ ಕಾರ್ಯಕ್ರಮವನ್ನು ನಿರೂಪಿಸಿ,ವ೦ದಿಸಿದರು.