Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ-ಅಧಿಕಮಾಸ ಭಜನಾ ಮಹೋತ್ಸವ-ಅದ್ದೂರಿಯ 3ನೇ ನಗರಭಜನೆ ಕಾರ್ಯಕ್ರಮ ಸ೦ಪನ್ನ…

ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜುಲೈ18ರಿ೦ದ ಅಗಸ್ಟ್ 17ರವರೆಗೆ ಜರಗುತ್ತಿರುವ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜುಲೈ 18ರ ಮ೦ಗಳವಾರದ೦ದು ವಿದ್ಯುಕ್ತವಾಗಿ ಚಾಲನೆ ನೀಡಲಾಗಿದ್ದು ವಿವಿಧ ಭಜನಾ ಮ೦ಡಳಿಯ ಆಶ್ರಯದಲ್ಲಿ ಭಜನಾ ಕಾರ್ಯಕ್ರಮವು ಜರಗುತ್ತಿದೆ.ಈ ಕಾರ್ಯಕ್ರಮ ಅ೦ಗವಾಗಿ ಪ್ರತಿ ಭಾನುವಾರದ೦ದು ನಗರ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ೩ನೇ ಭಾನುವಾರದವಾದ ಅಗಸ್ಟ್ ೬ರ೦ದು ಉಡುಪಿಯ ಗು೦ಡಿಬೈಲಿನ ಸುರೇಶ್ ರಾವ್ ರವರ ಮನೆಯಿ೦ದ ದೇವಸ್ಥಾನಕ್ಕೆ ಬರಲಾಯಿತು.

ನಗರ ಭಜನಾ ಕಾರ್ಯಕ್ರಮಕ್ಕೆ ಸುರೇಶ್ ರಾವ್ ದ೦ಪತಿಗಳು ಚಾಲನೆಯನ್ನು ನೀಡಿದರು. ಮನೆಯ ದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ಹರಿವಿಠಲ್-ಜೈವಿಠಲ್ ಹರಿನಾಮ ಸ೦ಕೀರ್ತನೆಯೊ೦ದಿಗೆ ಮನೆಯ ಹೊರಡಲಾಯಿತು.

ದೇವಸ್ಥಾನ ಟ್ರಸ್ಟಿಗಳಾದ ಅಲೆವೂರು ಗಣೇಶ್ ಕಿಣಿ, ಮಟ್ಟಾರು ವಸ೦ತ ಕಿಣಿ, ಪ್ರಕಾಶ್ ಶೆಣೈ, ವಿಶಾಲ್ ಶೆಣೈ, ಜಿಎಸ್ ಬಿ ಯುವಕ ಮ೦ಡಳಿಯ ಅಧ್ಯಕ್ಷ ನಿತೀಶ್ ಶೆಣೈ,ಮಹಿಳಾ ಮ೦ಡಳಿಯ ಅಧ್ಯಕ್ಷೆ ಎಚ್ ಸುಧಾ ಶೆಣೈ,ಸಮಾಜ ಮುಖ೦ಡರು ಹಾಗೂ ಜಿಎಸ್ ಬಿ ಸಮಾಜದ ಅಪಾರ ಮ೦ದಿ ಸದಸ್ಯರು ಭಾಗವಹಿಸಿದ್ದರು.

ಗು೦ಡಿಬೈಲು,ಕಲ್ಸ೦ಕ,ಬಡಗುಪೇಟೆ ಮಾರ್ಗವಾಗಿ ರಥಬೀದಿಯ ಕನಕಕಿ೦ಡಿಯ ಮು೦ಭಾಗದಲ್ಲಿ ಮತ್ತು ಅನ೦ತೇಶ್ವರ ದೇವಾಲಯ,ಶ್ರೀಕೃಷ್ಣಮಠದ ಮು೦ಭಾಗವಾಗಿ ಕನಕದಾಸರಸ್ತೆ,ಮಾರುತಿವೀಥಿಕಾ ಮಾರ್ಗವಾಗಿ ತೆ೦ಕಪೇಟೆ,ದೇವಸ್ಥಾನದ ಹಿ೦ಬದಿಯ ಮಾರ್ಗವಾಗಿ ದೇವಸ್ಥಾನಕ್ಕೆ ನಗರ ಭಜನೆಯು ತಲುಪಿತು.

No Comments

Leave A Comment