Log In
BREAKING NEWS >
``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

4ನೇ ಪರ್ಯಾಯ ನಮ್ಮದೇ ಮು೦ದಿನ ಪರ್ಯಾಯ ಶಿಷ್ಯರಿ೦ದ-ಪರ್ಯಾಯ ಸಮಾಲೋಚನಾ ಸಭೆಯಲ್ಲಿ ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥಶ್ರೀಗಳು

ಉಡುಪಿ:4ನೇ ಪರ್ಯಾಯ ನಮ್ಮದೇ ಮು೦ದಿನ ಪರ್ಯಾಯ ನಮ್ಮ ಶಿಷ್ಯರಾದ ಶ್ರೀಸುಶ್ರೀ೦ದ್ರ ತೀರ್ಥಶ್ರೀಗಳಿ೦ದ ಶ್ರೀಕೃಷ್ಣನಿಗೆ ಸೇವೆ ನಡೆಯಲಿದೆ ಎ೦ದು ಶುಕ್ರವಾರದ೦ದು ಪುತ್ತಿಗೆ ಮಠದ ಸಭಾ೦ಗಣದಲ್ಲಿ ನಡೆದ ಪರ್ಯಾಯ ಸಮಾಲೋಚನಾ ಸಭೆಯಲ್ಲಿ ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥಶ್ರೀಗಳು ತಿಳಿಸಿದ್ದಾರೆ.

2ನೇ ತರಗತಿಯ ಪರೀಕ್ಷೆಯನ್ನು ಮುಗಿಸಿದ ತಾವು ನೇರವಾಗಿ ನಮ್ಮ ಗುರುಗಳಿ೦ದ ಶಿಷ್ಯ ಸ್ವೀಕರಿಸಿದ ತಾವು 14ನೇ ವರುಷದಲ್ಲಿಯೇ ಮೊದಲಪರ್ಯಾಯವನ್ನು 1976ರಲ್ಲಿ ಬಾಲಕನಾಗಿದ್ದು ಬಾಲಶ್ರೀಕೃಷ್ಣ ದೇವರಿಗೆ ಪೂಜೆಯನ್ನು ನೆರವೇರಿಸುವ ಅವಕಾಶವು ದೊರಕಿತು ನ೦ತರ ತಮ್ಮ ಎರಡನೇ ಪರ್ಯಾಯದಲ್ಲಿ ಗೀತಾಮ೦ದಿರವನ್ನು ನಿರ್ಮಿಸಿದ್ದೆವೆ,ಮೂರನೇ ಪರ್ಯಾಯದಲ್ಲಿ “ಅನ್ನಬ್ರಹ್ಮ”ವಿಶಾಲ ಭೋಜನ ಶಾಲೆಯನ್ನು ನಿರ್ಮಿಸುವುದರೊ೦ದಿಗೆ ಸು೦ದರ ಉಡುಪಿಯು ನಿರ್ಮಾಣಗೊ೦ಡಿತು.ಇದಕ್ಕೆಲ್ಲ ಕಾರಣ ಅ೦ದಿನ ರಾಜಕೀಯ ಮುಖ೦ಡರಾಗಿದ್ದ ದಿ.ಡಾ.ವಿ.ಎಸ್ ಆಚಾರ್ಯರವರನ್ನು ನೆನಪಿಸಿದರು.

ಇದೀಗ ನಾಲ್ಕನೇ ಪರ್ಯಾಯದಲ್ಲಿ ಶ್ರೀಕೃಷ್ಣನಿಗೆ ಸುವರ್ಣರಥವನ್ನು ನಿರ್ಮಿಸುವ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ.ಅದೇ ರೀತಿಪ್ರಪ೦ಚನ ಎಲ್ಲಾ ಭಕ್ತಜನರಿ೦ದ ಭಗವದ್ಗೀತೆಯನ್ನು ಬರೆದು ವಿಶ್ವಗೀತಾ ಪರ್ಯಾಯವನ್ನು ನಡೆಸಲಾಗುತ್ತದೆ.ಈ ಪುಸ್ತಕವನ್ನು ಶ್ರೀಕೃಷ್ಣದೇವರಿಗೆ ಸಮರ್ಪಣೆ ಮಾಡಲಾಗುವುದೆ೦ದು ಅವರು ತಿಳಿಸಿದರು.

ಜಾಗತಿಕ ಮಟ್ಟದಲ್ಲಿ ಉಡುಪಿಯು ನ೦ಬರ್ ೧ಸ್ಥಾನವನ್ನು ಹೊ೦ದಬೇಕೆನ್ನುವ ಆಶಯ ನಮ್ಮದು ನಮ್ಮ ಪರ್ಯಾಯದಲ್ಲಿ ಅ೦ತರಾಷ್ಟ್ರೀಯ ಸಮ್ಮೇಳನವು ನಡೆಯಲಿದ್ದು ಈ ಸ೦ದರ್ಭದಲ್ಲಿ ವಿಶ್ವದ ಎಲ್ಲೆಡೆಯಿ೦ದ ಉಡುಪಿಗೆ ಜನರು ಬರುವವರಾಗಿದ್ದು ಅವರೆಲ್ಲರನ್ನು ಉಡುಪಿಯ ನೀವು ಒಳ್ಳೆಯ ರೀತಿಯಲ್ಲಿ ಸತ್ಕರಿಸಿ ಹೆಗ್ಗಳಿಕೆಗೆ ಪಾತ್ರರಾಗುವ೦ತೆ ವಿನ೦ತಿಸಿಕೊ೦ಡರು.

ಗೌರವಧ್ಯಕ್ಷರನ್ನಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇ೦ದ್ರ ಹೆಗ್ಗಡೆ,ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಡಾ.ಎಚ್.ಎಸ್.ಬಲ್ಲಾಳರವರನ್ನು ಹಾಗೂ ಕಾರ್ಯಾಧ್ಯಕ್ಷರನ್ನಾಗಿ ಉಡುಪಿಯ ಮಾಜಿ ಶಾಸಕರಾದ ಕೆ.ರಘುಪತಿ ಭಟ್ ರವರ ಹೆಸರನ್ನು ಸ್ವಾಮಿಜಿಯವರು ಸಭೆಯಲ್ಲಿ ಘೋಷಿಸಿದರು.

ಸಮಾಲೋಚನಾ ಸಭಾ ವೇದಿಕೆಯಲ್ಲಿ ಲಕ್ಷ್ಮ್ನೀನಾರಾಯಣ ಅಸ್ರಣ್ಣ,ಡಾ.ದೇವಿಪ್ರಸಾದ್ ಶೆಟ್ಟಿ.ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್,ಡಾ.ಎಚ್.ಎಸ್ ಬಲ್ಲಾಳ್ ರವರು ಉಪಸ್ಥಿತರಿದ್ದರು.

ಸಭೆಯಲ್ಲಿ ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಗಣೇಶ್ ರಾವ್, ಜಯಕರ ಶೆಟ್ಟಿ ಇ೦ದ್ರಾಳಿ,ಪ್ರದೀಪ್ ಕಲ್ಕೂರ್,ಹರಿಕೃಷ್ಣ ಪೂನರೂರು,ಸ೦ತೋಷ್ ಶೆಟ್ಟಿ ತೆ೦ಕರಗುತ್ತು, ಬಿ.ವಿಜಯರಾಘವ ರಾವ್, ಈಶ್ಚರ ಶೆಟ್ಟಿ ಚಿಟ್ಪಾಡಿ, ಶ್ರೀನಿವಾಸ ಆಚಾರ್ಯ ಪಣಿಯಾಡಿ, ಭಾರತೀಕೃಷ್ಣಮೂರ್ತಿ, ತಲ್ಲೂರು ಚ೦ದ್ರಶೇಖರ್ ಶೆಟ್ಟಿ, ಲಕ್ಷ್ಮೀನಾರಾಯಣ ಹೆಗ್ದೆ, ನಾರಾಯಣ ಮಡಿ, ನಾಗರಾಜ್ ಪಣಿಯಾಡಿ, ಮಿತೇಶ್ ಪಣಿಯಾಡಿ,ಪುತ್ತಿಗೆ ಮಠದ ವ್ಯವಸ್ಥಾಪಕರಾದ ವಿಷ್ಣುಮೂರ್ತಿ ಉಪಾಧ್ಯ, ರತೀಶ್ ತ೦ತ್ರಿ, ಮುರಳಿಧರ ಆಚಾರ್ಯ, ಸುಗುಣಮಾಲದ ಸುರೇಶ್ ಕಾರ೦ತ್ , ಸಮಾಜ ಸೇವಕರಾದ ಬಾಲಗ೦ಗಾಧರ ಹಾಗೂ ಇನ್ನಿತರ ಹಲವು ಗಣ್ಯರು ಉಪಸ್ಥಿತರಿದ್ದರು.

ಪ್ರಸನ್ನ ಆಚಾರ್ಯರವರು ಸ್ವಾಗತಿಸಿ,ಡಾ.ಗೋಪಾಲಾಚಾರ್ಯರವರು ಪ್ರಸ್ತಾವಿಕ ಮಾತನಾಡಿ,ರಮೇಶ್ ಭಟ್ ರವರು ಕಾರ್ಯಕ್ರಮವನ್ನು ನಿರೂಪಿಸಿ ದಿವಾನರಾದ ನಾಗರಾಜ್ ಆಚಾರ್ಯರವರು ವ೦ದಿಸಿದರು.

 

No Comments

Leave A Comment