ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಪಲಿಮಾರುಶ್ರೀಗಳಿಗೆ ಮಾತೃ ವಿಯೋಗ

ಕಟೀಲು: ಖ್ಯಾತ ವೈದಿಕರಾಗಿದ್ದ ದಿ. ಶಿಬರೂರು ಹಯಗ್ರೀವ ತಂತ್ರಿಯವರ ಪತ್ನಿ, ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಮಾತೃಶ್ರೀ ಕಸ್ತೂರಿಯಮ್ಮ ಮಂಗಳವಾರ ಬೆಳಿಗ್ಗೆ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಕಟೀಲು ಸೇರಿದಂತೆ ವಿವಿಧ ದೇಗುಲಗಳ ತಂತ್ರಿಗಳಾಗಿರುವ ನಿವೃತ್ತ ಉಪನ್ಯಾಸಕ ವೇದವ್ಯಾಸ ತಂತ್ರಿ ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.

ಶಿಬರೂರು ಮಠ ಹಯಗ್ರೀವ ತಂತ್ರಿ ತನ್ನ ಮನೆಯಲ್ಲೇ ನೂರಾರು ಮಂದಿ ವೈದಿಕರಿಗೆ ಗುರುಗಳಾಗಿ ಪಾಠ ಮಾಡಿದ್ದರು. ಕಸ್ತೂರಿಯಮ್ಮ ತಂತ್ರಿಗಳ ಶಿಷ್ಯರನ್ನು ಊಟ ಉಪಾಹಾರವಿತ್ತು ಸಲಹಿದ್ದರು.

kiniudupi@rediffmail.com

No Comments

Leave A Comment