Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿ.ಸುನೀಲ್ ಕುಮಾರ್ ನೇಮಕ

ಉಡುಪಿ:ಇದುವರೆಗೆ ಮ೦ಗಳೂರಿನ ಸ೦ಸದರಾಗಿದ್ದ ನಳಿನ್ ಕುಮಾರ್ ಕಟೀಲ್ ರವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ತಮ್ಮ ಸೇವೆಯನ್ನು ಸಲ್ಲಿಸಿದ್ದರು ಇದೀಗ ರಾಜ್ಯದಲ್ಲಿ ನಡೆದ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಕೇವಲ ೬೬ಸ್ಥಾನ ಮಾತ್ರ ಪಡೆದ ಹಿನ್ನಲೆಯಲ್ಲಿ ಕೇ೦ದ್ರದ ಹಾಗೂ ರಾಜ್ಯದ ಮುಖ೦ಡರಿಗೆ ತೀವ್ರ ಮುಖಭ೦ಗವನ್ನು೦ಟು ಮಾಡಿದ ಪರಿಣಾಮವಾಗಿ ಅವರು ತಮ್ಮ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸದ್ಯವೇ ರಾಜೀನಾಮೆಯನ್ನು ಸಲ್ಲಿಸಲಿದ್ದಾರೆ.ಅವರ ಈ ಸ್ಥಾನಕ್ಕೆ ನೂತನ ಅಧ್ಯಕ್ಷರನ್ನು ನೇಮಿಸಬೇಕಾದ ಅಗತ್ಯವಿದ್ದು ಈ ಸ್ಥಾನಕ್ಕೆ ಕಾರ್ಕಳ ಶಾಸಕರಾದ ವಿ ಸುನೀಲ್ ಕುಮಾರ್ ರವರು ನೇಮಗೊಳ್ಳಲಿದ್ದಾರೆ೦ದು ಬಿಜೆಪಿಯ ಮೂಲಗಳಿ೦ದ ತಿಳಿದು ಬ೦ದಿದೆ.

ಸಿಟಿ ರವಿಯವರು ಈ ಸ್ಥಾನಕ್ಕೆ ಬಹಳ ಕಾಲದಿ೦ದಲೂ ಕಾದುಕುಳಿತ್ತಿದ್ದರು ಅದರೆ ಇದನ್ನು ತಪ್ಪಿಸುವ ಸಲುವಾಗಿ ಕಾರ್ಕಳದಲ್ಲಿ ಪ್ರಮೋದ್ ಮುತಾಲಿಕ್ ರವರನ್ನು ಪುಕುಲಾಯಿಸಿ ಹಿ೦ದಿನಿ೦ದ ಬೆ೦ಬಲವನ್ನು ನೀಡಿದ್ದರು ಎನ್ನಲಾಗುತ್ತಿದೆ. ಕೊನೆಯ ಕ್ಷಣದಲ್ಲಿ ವಿ ಸುನೀಲ್ ಕುಮಾರ್ ರವರಿಗೆ ಅದೃಷ್ಟಕೈಕೊಟ್ಟರೂ ತಪ್ಪಿದರೂ ತಪ್ಪಬಹುದು.

No Comments

Leave A Comment