Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಉಡುಪಿಯಲ್ಲಿ ಶಾ೦ತಿಯುತ ಮತದಾನ-ಮೂರು ಪಕ್ಷಗಳ ನಡುವೆ ಭಾರೀ ಮತಕ್ಕಾಗಿ ಪೈಪೋಟಿ

ಉಡುಪಿ:ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಬೆಳಿಗ್ಗೆಯಿ೦ದ ಬಿರುಸಿನ ಮತದಾನ ನಡೆದಿದೆ.ಮತದಾನದಲ್ಲಿ ರಾಜ್ಯದಲ್ಲೇ ಮು೦ಚುಣಿಯಲ್ಲಿ ಉಡುಪಿ ಜಿಲ್ಲೆಯು ದಾಖಲೆಯನ್ನು ಮಾಡಿದೆ.ಸ೦ಜೆಯ ಸಮಯದಲ್ಲಿ ಮತ್ತಷ್ಟು ಬಿರುಸಿನ ಮತದಾನವು ನಡೆದಿದೆ.

ಯುವಮತದಾರರು ಉತ್ಸಾಹದಿ೦ದ ಮತಗಟ್ಟೆ ತೆರಳಿ ತಮ್ಮ ಪ್ರಥಮ ಮತದಾನದ ಕಾರ್ಯಕ್ರಮದಲ್ಲಿ ಭಾಗವಹಿಸಿದ ದೃಶ್ಯವು ಎಲ್ಲಾ ಕ೦ಡು ಬ೦ದಿದೆ.

ಉಡುಪಿಯ ಅಷ್ಟಮಠಾಧೀಶರು ಸಹ ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ಉತ್ಸಾಹದಿ೦ದ ಮತದಾನವನ್ನು ಮಾಡಿದ್ದಾರೆ. ಜೆಡಿಎಸ್, ಕಾ೦ಗ್ರೆಸ್, ಬಿಜೆಪಿ ಪಕ್ಷದ ಕಾರ್ಯಕರ್ತರು ಮತದಾರರನ್ನು ಮನಪರಿವರ್ತಿಸಿ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತದಾನವನ್ನು ಮಾಡಿಸಿದ್ದಾರೆ.

ಒಟ್ಟಾರೆ ಯಾವ ಪಕ್ಷದ ಬಗ್ಗೆ ಮತದಾರ ತನ್ನ ನಿಲುವನ್ನು ತೋರಿಸಿದ್ದಾರೆ೦ಬುವುದನ್ನು ಶನಿವಾರದ೦ದು ತಿಳಿಯ ಬಹುದಾಗಿದೆ.

No Comments

Leave A Comment