Log In
BREAKING NEWS >
ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪರಮೇಶ್ವರ್ ಅನಂತ್ ಹೆಗ್ಡೆ ನೇಮಕ...

ಕೋಟ್ಯಂತರ ರೂಪಾಯಿ ಬೆಲೆಯ ಅಕ್ರಮ ಚಿನ್ನ ಪತ್ತೆ : ಇಬ್ಬರು ವಶಕ್ಕೆ

ಚಿಕ್ಕಮಗಳೂರು: ತರೀಕೆರೆ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಾಹನ‌ ತಪಾಸಣೆ ಮಾಡುವಾಗ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಅಕ್ರಮ ಚಿನ್ನ ಪತ್ತೆಯಾಗಿದೆ.

ಎಸ್ಪಿ‌ ಉಮಾ ಪ್ರಶಾಂತ್ ನೇತೃತ್ವದಲ್ಲಿ ಕಾರ್ಯಚರಣೆ ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದ ಕೋಟ್ಯಾಂತರ ಮೌಲ್ಯದ ಚಿನ್ನ‌ ವಶಕ್ಕೆ ಪಡೆದ ಪೊಲೀಸ್ ತಂಡ. ತರೀಕೆರೆ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ‌ಮಾಡುವಾಗ ಪತ್ತೆಯಾದ ಚಿನ್ನ 2 ಕೋಟಿ 30‌ ಲಕ್ಷ‌‌ ಬೆಲೆ ಬಾಳುವ 9 ಕೆ.ಜಿ‌. 300 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ . ವಾಹನ ದಲ್ಲಿ ಚಿನ್ನದ ಸರ, ಚಿನ್ನದ ಬಿಸ್ಕೆಟ್ ಪತ್ತೆಯಾಗಿದೆ. ನಾಲ್ಕು ಬಾಕ್ಸ್ ನಲ್ಲಿ‌ ಚಿನ್ನವನ್ನ‌ ಪಿಕಪ್ ವಾಹನದಲ್ಲಿ‌ ತರುತ್ತಿದ್ದ ಇಬ್ಬರು ಪಿಕಪ್ ವಾಹನ ಸವಾರ ಸೇರಿದಂತೆ ಇಬ್ಬರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಎಸ್ಪಿ ಈ ಮಾಹಿತಿ ಸಂಗ್ರಹಿಸಿದ್ದಾರೆ.ತರೀಕೆರೆ ಪಟ್ಟಣದ ಪೊಲೀಸ್ ಚೆಕ್ ಪೋಸ್ಟ್ ಬಳಿ ಘಟನೆ ಚುನಾವಣೆ ನಿಮಿತ್ತ ಜಿಲ್ಲಾದ್ಯಂತ ಗಡಿಗಳಗಳಲ್ಲಿ ನಿರ್ಮಿಸಿರುವ ಚೆಕ್ ಪೋಸ್ಟ್ ಬಳಿ ತಪಾಸಣೆ ವೇಳೆ ಈ ಚಿನ್ನ ಪತ್ತೆಯಾಗಿದೆ.

ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

No Comments

Leave A Comment