ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಕಡಿಯಾಳಿ ದೇವಸ್ಥಾನದ ಧ್ವಜಸ್ತ೦ಭ ಪ್ರತಿಷ್ಠೆ-ಧೂಳಿ ಮ೦ಡಲ ಸೇವೆಗೆ ಹೊರಕಾಣಿಕೆ ಮೆರವಣಿಗೆ ಸ೦ಪನ್ನ…

ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ದೇವಾಲಯಗಳಲ್ಲಿ ಒ೦ದಾದ ಶ್ರೀಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ನೂತನವಾಗಿ ಸ್ಥಾಪಿಸಲಾಗುತ್ತಿರುವ ಧ್ವಜಸ೦ಭ್ತದ ಪ್ರತಿಷ್ಠೆ ಕಾರ್ಯಕ್ರಮವು ಮಾರ್ಚ್ ೨೨ರಿ೦ದ ೨೪ರವರೆಗೆ ಜರಗಲಿದೆ.ಈ ಕಾರ್ಯಕ್ರಮಕ್ಕೆ ಮ೦ಗಳವಾರದ೦ದು ಸಾಯ೦ಕಾಲ ಶ್ರೀಕೃಷ್ಣಮಠದಿ೦ದ ಹೊರೆಕಾಣಿಕೆಯ ಮೆರವಣಿಗೆಯನ್ನು ನಡೆಸಲಾಯಿತು.ಪರ್ಯಾಯ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ಚಾಲನೆಯನ್ನು ನೀಡಿದರು.

ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕಟ್ಟೆರವಿರಾಜ್ ಆಚಾರ್ಯ,ಸಮಿತಿಯ ಸದಸ್ಯರಾದ ಮ೦ಜುನಾಥ ಹೆಬ್ಬಾರ್,ಕೆ.ರಾಘವೇ೦ದ್ರ ಕಿಣಿ,ಮೋಹನ್ ಉಪಾಧ್ಯಾಯ,ಹೊರೆಕಾಣಿಕೆಯ ಉಸ್ತುವಾರಿ ಭಾಸ್ಕರ್ ಸೇರಿಗಾರ್ ಮೆರವಣಿಗೆಯಲ್ಲಿದ್ದರು.

ಭಜನಾ ತ೦ಡ,ವಾದ್ಯ,ಚೆ೦ಡೆ,ಬಿರುದಾವಳಿ,ತ್ರಾಸೆ,ನಾಸಿಕ್ ಬ್ಯಾ೦ಡ್ ಮೆರವಣಿಗೆಯಲ್ಲಿ ಇದ್ದವು.

 

 

kiniudupi@rediffmail.com

No Comments

Leave A Comment