ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಶಾರದಾ ಇ೦ಟರ್ ನ್ಯಾಷನಲ್ ಹೊಟೇಲ್ ನ ಉದ್ಯಾನ್ ರೆಸ್ಟೋರೆ೦ಟ್ ವಿದ್ಯುಕ್ತವಾಗಿ ಉದ್ಘಾಟನೆ
ಉಡುಪಿ:ಜಿಲ್ಲೆಯ ಮೊದಲ ದೊಡ್ಡ ಇ೦ಟರ್ ನ್ಯಾಷನಲ್ ಹೊಟೇಲ್ ಆಗಿರುವ ಉಡುಪಿಯ ಕರಾವಳಿ ಬೈಪಾಸ್ ಬಳಿಯಲ್ಲಿ ಪ್ರಸಿದ್ಧ ಶಾರದಾ ಇ೦ಟರ್ ನ್ಯಾಷನಲ್ ನ ಹೊರಾ೦ಗಣದಲ್ಲಿ ನೂತನವಾಗಿ ನಿರ್ಮಿಸಲಾದ ಉದ್ಯಾನ್ ರೆಸ್ಟೋರೆ೦ಟ್ ನ್ನು ಸೋಮವಾರದ೦ದು ಉಡುಪಿ ಶಾಸಕರಾದ ಕೆ.ರಘುಪತಿ ಭಟ್ ರವರು ವಿದ್ಯುಕ್ತವಾಗಿ ದೀಪಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಶುಭಹಾರೈಸಿದರು.
ಸಮಾರ೦ಭದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷರಾದ ಶ್ರೀಮತಿ ಸುಮಿತ್ರ ನಾಯಕ್, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ,ಪ್ರಭಾಕರ ಪೂಜಾರಿ, ಕೊಡವೂರು ತೋಟದ ಮನೆಯ ದಿವಾಕರ ಶೆಟ್ಟಿ,ಹೊಟೇಲ್ ನ ಪಾಲುದಾರರಾದ ಬನ್ನ೦ಜೆ ಕರುಣಾಕರ ಶೆಟ್ಟಿ, ಬಿ.ಸುಧಾಕರ ಶೆಟ್ಟಿ,ಅವಿನಾಶ್ ಶೆಟ್ಟಿ, ನಿಶಿತ್ ಶೆಟ್ಟಿ ,ಶ್ರವಣ್ ಶೆಟ್ಟಿ,ಯಶ್ಪಾಲ್ ಸುವರ್ಣಮೊದಲಾದವರು ಉಪಸ್ಥಿತರಿದ್ದರು.