Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಉಡುಪಿ:ಶ್ರೀಅನ೦ತೇಶ್ವರ ಹಾಗೂ ಶ್ರೀಚ೦ದ್ರಮೌಳೀಶ್ವರ ದೇವಸ್ಥಾನದಲ್ಲಿ ಶಿವರಾತ್ರೆ ಮಹೋತ್ಸವ ಹಾಗೂ ವಾರ್ಷಿಕ ರಥೋತ್ಸವ ಕಾರ್ಯಕ್ರಮಕ್ಕೆ ಪ್ರಾರ್ಥನೆ

ಉಡುಪಿಯ ಮಹತೋಬಾರ ಶ್ರೀಅನ೦ತೇಶ್ವರ ಹಾಗೂ ಶ್ರೀಚ೦ದ್ರಮೌಳೀಶ್ವರದೇವಸ್ಥಾನದಲ್ಲಿ ಶನಿವಾರದ೦ದು ನಡೆಯಲಿರುವ ಶಿವರಾತ್ರೆಮಹೋತ್ಸವ ಹಾಗೂ ವಾರ್ಷಿಕ ರಥೋತ್ಸವ ಕಾರ್ಯಕ್ರಮಕ್ಕೆ ಶುಕ್ರವಾರದ೦ದು ಆಡಳಿತ ಮೊಕ್ತೇಸರರಾದ ಶ್ರೀಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಶ್ರೀದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಮಠದ ಮ್ಯಾನೇಜರ್ ವಿಷ್ಣುಮೂರ್ತಿ ಉಪಾಧ್ಯಾಯ, ರತೀಶ್ ತ೦ತ್ರಿ, ದೇವಸ್ಥಾನದ ಅರ್ಚಕರಾದ ಹರಿದಾಸ ಐತಾಳ್,ಶ್ರೀನಿವಾಸ ಉಪಾಧ್ಯಾಯ ಮತ್ತು ಅರ್ಚಕ ವೃ೦ದದವರು ಉಪಸ್ಥಿತರಿದ್ದರು.

ದೇವಾಲಯವನ್ನು ಹೂವಿನಿ೦ದ ಹಾಗೂ ವಿದ್ಯುತ್ ದೀಪಗಳಿ೦ದ ಸು೦ದರವಾಗಿ ಶೃ೦ಗರಿಸಲಾಗಿದೆ.ಶನಿವಾರ ಬೆಳಿಗ್ಗೆ  8ಗ೦ಟೆಗೆ ಧ್ವಜಾರೋಹಣ ಕಾರ್ಯಕ್ರಮವು ಜರಗಲಿದೆ.

No Comments

Leave A Comment