ಉಡುಪಿ ನೂತನ ಪೌರಯುಕ್ತರಾಗಿ ರಮೇಶ್ ಪಿ ನಾಯ್ಕ, ಡಾ.ಉದಯಕುಮಾರ್ ಕಾರವಾರಕ್ಕೆ ವರ್ಗಾವಣೆ
ಉಡುಪಿ:ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಭಾರತೀಯ ಚುನಾವಣಾ ಆಯೋಗ ನೀಡಿರುವ ನಿರ್ದೇಶನದ೦ತೆ ಉಡುಪಿಯ ಪೌರಾಯುಕ್ತ ಡಾ.ಉದಯಕುಮಾರ್ ಶೆಟ್ಟಿ ಅವರನ್ನು ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರಸಭೆಗೆ ಪೌರಾಯುಕ್ತರಾಗಿ ವರ್ಗಾವಣೆಯನ್ನು ಮಾಡಲಾಗಿದೆ.
ಉಡುಪಿಯ ನಗರಸಭೆಯ ನೂತನ ಪೌರಾಯುಕ್ತರಾಗಿ ಕಾರವಾರ ನಗರಸಭೆಯ ರಮೇಶ್ ಪಿ ನಾಯ್ಕ ಅವರನ್ನು ನಿಯೋಜಿಸಿ ಸರಕಾರ ಆದೇಶವನ್ನು ಹೊರಡಿಸಿದೆ.