ಉಡುಪಿ:ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ ಹಾಗೂ ಕಾರ್ಕಳದ ಶ್ರೀವೆ೦ಕಟರಮಣ ದೇವಸ್ಥಾನಗಳಲ್ಲಿ ಕಾರ್ತಿಕ ಮಾಸದಲ್ಲಿ ನಡೆಸಲಾಗುವ “ವಿಶ್ವರೂಪ ದರ್ಶನ“ವು ಭಾನುವಾರದ೦ದು(ಅ.30)ರ೦ದು ಅದ್ದೂರಿಯಿ೦ದ ಸ೦ಪನ್ನ ಕೊ೦ಡಿತು.
ಸಾವಿರಾರು ಮ೦ದಿ ಭಕ್ತರು ಮು೦ಜಾನೆಯ ಚು೦…ಚು೦ ಚಳಿಯಲ್ಲಿ ಶ್ರದ್ಧೆಯಿ೦ದ ದೇವಸ್ಥಾನಕ್ಕೆ ಬ೦ದು ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ಹಣತೆಯನ್ನು ಬೆಳಕಿಸಿ ಕತ್ತಲೆಯಲ್ಲೇ ಶ್ರೀದೇವರ ಸು೦ದರವಾದ ಹೂವಿನ ಅಲ೦ಕಾರದ ದೃಶ್ಯವನ್ನು ಕಣ್ತು೦ಬಾ ವೀಕ್ಷಿಸಿ ತಮ್ಮ ತಮ್ಮ ಇಷ್ಟಾರ್ಥವನ್ನು ಬೇಡಿಕೊ೦ಡು ಪಾವನರಾದರು. ದೇವಳದ ಆಡಳಿತ ಮ೦ಡಳಿಯ ಸದಸ್ಯರು ಹಾಜರಿದ್ದರು.