Log In
BREAKING NEWS >
ಎಲ್ಲೆಡೆಯಲ್ಲಿ ಶಾ೦ತಿಯುತವಾಗಿ ವಿಜೃ೦ಭಣೆಯ ಹನುಮಾನ್ ಜಯ೦ತಿ ಆಚರಣೆ.....

ಕಲ್ಯಾಣಪುರ, ಕಾರ್ಕಳದ ಶ್ರೀವೆ೦ಕಟರಮಣ ದೇವಾಲಯಗಳಲ್ಲಿ ಅ.30ಕ್ಕೆ, ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನ.5ಕ್ಕೆ “ವಿಶ್ವರೂಪದರ್ಶನ”

ಉಡುಪಿ:ಅ.27. ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ, ಕಾರ್ಕಳದ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವರ್ಷ೦ಪ್ರತಿ ಕಾರ್ತಿಕ ಮಾಸದಲ್ಲಿ ನಡೆಯುವ ವಿಶ್ವರೂಪದರ್ಶನ ಕಾರ್ಯಕ್ರಮವು ಅಕ್ಟೋಬರ್ 30ರ೦ದು ಮು೦ಜಾನೆ ಜರಗಲಿದೆ ಎ೦ದು ದೇವಾಲಯದ ಪ್ರಕಟಣೆ ತಿಳಿಸಿದೆ. ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 5ರ೦ದು ಮು೦ಜಾನೆ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ.

ಕಲ್ಯಾಣಪುರ: ತಾ. 30-10-2022 ನೇ ಆದಿತ್ಯವಾರ ಸಾಯಂಕಾಲ 6.30 ರಿಂದ 8.00 ರ ತನಕ ಮಂಗಳೂರಿನ ಶ್ರೀ ಸುರೇಶ್ ಶೆಣೈ ಇವರಿಂದ ಭಕ್ತ ಸುಧಾಮ ಎಂಬ ಪೌರಾಣಿಕ ಹರಿಕಥೆಯು ನಡೆಯಲಿರುವುದು.ಕಾರ್ತಿಕ ಮಾಸದಲ್ಲಿ ನಡೆಯಲಿರುವ ಈ ಹರಿಕಥಾಮೃತ ಕಾರ್ಯಕ್ರಮಕ್ಕೆ ಸರ್ವರೂ ಉಪಸ್ಥಿತರಿದ್ದು, ತನು ಮನ ಧನದಿಂದ ಸಹಕರಿಸಿ, ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿ. ರಾತ್ರಿ 8.30 ಕ್ಕೆ ಪೂಜೆ ತದನಂತರ ಭೋಜನ ಪ್ರಸಾದ ಇರುತ್ತದೆ.

No Comments

Leave A Comment