Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಅನುಮಾನಾಸ್ಪದ ಸಂಚಾರ- ಮೀನುಗಾರನ ಮೇಲೆ ಭಾರತೀಯ ನೌಕಾಪಡೆ ಗುಂಡಿನ ದಾಳಿ

ರಾಮನಾಥಪುರ, ಅ 21: ಮೀನುಗಾರಿಕೆಯಲ್ಲಿ ತೊಡಗಿದ್ದ ಮೀನುಗಾರನ ಮೇಲೆ ಅನುಮಾನಗೊಂಡು ಭಾರತೀಯ ನೌಕಾಪಡೆಯು ಆತನ ಮೇಲೆ ಗುಂಡು ಹಾರಿಸಿದ ಘಟನೆ ಕೊಡಿಯಾಕರೈ ಬಳಿ ಶುಕ್ರವಾರ ನಡೆದಿದೆ.

ಮೈಲಾಡುತುರೈ ಮೂಲದ ನಿವಾಸಿ ವೀರವೆಲ್ (30) ಗಾಯಗೊಂಡ ವ್ಯಕ್ತಿ. ನೌಕಾಪಡೆ ಸಿಬಂದಿ ಈತ ಹಾಗೂ ದೋಣಿಯ ಮೇಲೆ ಹಲವು ಬಾರಿ ಗುಂಡು ಹೊಡೆದಿದ್ದಾರೆ. ಇದರಿಂದ ಆತನ ಕಾಲು, ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿದೆ. ಗಾಯಾಳುವನ್ನು ಕೂಡಲೇ ನೌಕಾ ಹೆಲಿಕಾಪ್ಟರ್‍ ಬಳಸಿ ರಾಮನಾಥಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಧುರೈ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ.

ಭಾರತ ಹಾಗೂ ಶ್ರೀಲಂಕಾವನ್ನು ಬೇರ್ಪಡಿಸುವ ಪಾಲ್ಕ್ ಕೊಲ್ಲೆಯ ಮೇಲೆ ಭಾರತೀಯ ನೌಕಾಪಡೆ ನಿರಂತರವಾಗಿ ನಿಗಾ ಇಟ್ಟಿದ್ದು, ಗಸ್ತು ತಿರುಗುತ್ತಿದ್ದ ವೇಳೆ ಭಾರತೀಯ ನೌಕಾಪಡೆಗೆ ದೋಣಿಯೊಂದು ಅನುಮಾನಾಸ್ಪದವಾಗಿ ಹೋಗುತ್ತಿರುವ ಬಗ್ಗೆ ಸಂಶಯ ಬಂದಿದ್ದು, ಹಲವು ಬಾರಿ ಆತನಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ ದೋಣಿ ಸಂಚಾರ ನಿಂತಿರಲಿಲ್ಲ. ಇದಕ್ಕಾಗಿ ದೋಣಿ ಹಾಗೂ ಮೀನುಗಾರನಿಗೆ ನೌಕಾಪಡೆ ಗುಂಡು ಹಾರಿಸಿದೆ ಎನ್ನಲಾಗಿದೆ. ರಾಮನಾಥಪುರಂ ಜಿಲ್ಲಾಧಿಕಾರಿ ಜಾನಿ ಟಾಮ್ ವರ್ಗೀಸ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

No Comments

Leave A Comment