Log In
BREAKING NEWS >
ಎಲ್ಲೆಡೆಯಲ್ಲಿ ಶಾ೦ತಿಯುತವಾಗಿ ವಿಜೃ೦ಭಣೆಯ ಹನುಮಾನ್ ಜಯ೦ತಿ ಆಚರಣೆ.....

ತೆಂಗಿನ ಮರಕ್ಕೆ ಅಕ್ರಮ ವಿದ್ಯುತ್ ಸಂಪರ್ಕ: ಆಹಾರ ಅರಸಿ ಬಂದ ಆನೆ ಬಲಿ

ಚಾಮರಾಜನಗರ: ಬೆಳೆ ರಕ್ಷಣೆಗಾಗಿ ಹಾಕಲಾಗಿದ್ದ ಅಕ್ರಮ ವಿದ್ಯುತ್ ಸಂಪರ್ಕ ಆನೆಯೊಂದನ್ನು ಬಲಿ ಪಡೆದುಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ನಡೆದಿದೆ.

ಪುತ್ತನಪುರರಾಜು ಆರೋಪಿ. ತೆಂಗಿನ ಮರದಿಂದ ತೆಂಗಿನ ಮರಕ್ಕೆ ಎರಡು ಅಡಿ ಎತ್ತರದಲ್ಲಿ ಜಮೀನು ಮಾಲೀಕ ಅಕ್ರಮವಾಗಿ ವಿದ್ಯುತ್ ಹರಿಸಿದ್ದಿರಿಂದ ಆಹಾರ ಅರಸಿ ಬಂದ 25 ವರ್ಷದ ಹೆಣ್ಣಾನೆ ಬಲಿಯಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಆರೋಪಿ ತಲೆಮರೆಸಿಕೊಂಡಿದ್ದಾನೆ.

No Comments

Leave A Comment