Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಬೋಟಿಗೆ ಇನ್ನೊಂದು ಬೋಟು ಢಿಕ್ಕಿ : ಲಕ್ಷಾಂತರ ರೂ. ನಷ್ಟ

ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಸಮುದ್ರದಲ್ಲಿ ಚಲಿಸುತ್ತಿದ್ದ ಬೋಟಿಗೆ ಮತ್ತೂಂದು ಬೋಟು ಢಿಕ್ಕಿ ಹೊಡೆದು ಹಾನಿಗೊಂಡ ಘಟನೆ ಸಂಭವಿಸಿದೆ.

ಹಾನಿಗೊಳಗಾದ ಸ್ವರ್ಣದೀಪ ಬೋಟ್ ಗುರುದಾಸ್‌ ಸಾಲ್ಯಾನ್‌ ಅವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ.

ಬೆಳಗ್ಗೆ ಮೀನುಗಾರಿಕೆಗೆ ತೆರಳುವಾಗ ಘಟನೆ ನಡೆದಿದೆ. ಮಲ್ಪೆ ಬಂದರಿನ ಸಮೀಪ ನೇರದಲ್ಲಿ ಮೊತ್ತೂಂದು ಸ್ಟೀಲ್‌ಬೋಟ್‌ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ಬೋಟ್‌ ಹಾನಿಗೊಂಡು ಒಳಗೆ ನೀರು ಬರಲಾರಂಬಿಸಿತ್ತು. ಕತ್ತಲಾದ್ದರಿಂದ ಬೋಟಿನಲ್ಲಿದ್ದ ಕಾರ್ಮಿಕರಿಗೆ ಢಿಕ್ಕಿ ಹೊಡೆದ ಬೋಟನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ತಿಳಿಯಲಾಗಿದೆ.

ಬೋಟನ್ನು ನಿಧಾನವಾಗಿ ಬಂದರಿನೊಳಗೆ ತರಲಾಯಿತು. ಸುಮಾರು 40 ಲಕ್ಷ ರೂ. ನಷ್ಟವಾಗಿದೆ ಎಂದು ಆಂದಾಜಿಸಲಾಗಿದೆ.ಆದರೆ ಬೋಟ್ ಒಳಗೆ ಇದ್ದ ಕಾರ್ಮಿಕರಿಗೆ ಯಾವುದೇ ಅಪಾಯ ಉಂಟಾಗಿಲ್ಲ.

No Comments

Leave A Comment