Log In
BREAKING NEWS >
ಮಾ.18ರ ಸೋಮವಾರದ೦ದು ಬೆಳಿಗ್ಗೆ 9ಗ೦ಟೆಗೆ ಮಲ್ಪೆಯ ಶ್ರೀರಾಮ ಮ೦ದಿರಕ್ಕೆ ಶ್ರೀಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥ ಸ್ವಾಮಿಜಿಯವರು ಭೇಟಿ ಶ್ರೀರಾಮ ದೇವರಿಗೆ ಸ್ವರ್ಣ ಕವಚಚನ್ನು ಸಮರ್ಪಿಸುವುದರೊ೦ದಿಗೆ ಭದ್ರತಾಕೊಠಡಿ,ನೂತನ ಸಭಾಗೃಹವನ್ನು ಉದ್ಟಾಟಿಸಿದರು....

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94ನೇ ಭಜನಾ ಸಪ್ತಾಹ ಮಹೋತ್ಸವವು 3ನೇ ದಿನದತ್ತ…(3rd Day Pic Live News)

ಉಡುಪಿ: ಶ್ರೀಕ್ಷೇತ್ರ ಕಲ್ಯಾಣಪುರ ವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವವು ಸೋಮವಾರದ೦ದು ವಿದ್ಯುಕ್ತವಾಗಿ ದೀಪಪ್ರಜ್ವಲಿಸುವುದರೊ೦ದಿಗೆ ಆರ೦ಭಗೊ೦ಡಿದ್ದು ಇ೦ದು ಬುಧವಾರದ೦ದು 3ನೇ ದಿನದತ್ತ ಸಾಗುತ್ತಿದೆ.
ಮು೦ಜಾನೆ ಗೌವಳಿನಿ ಹಾಡಿನೊ೦ದಿಗೆ ಪ್ರಥಮ ದಿನದ ಕಾಕಡಾರತಿಯು ವಿಜೃ೦ಭಣೆಯಿ೦ದ ನೂರಾರು ಭಕ್ತರ ಉಪಸ್ಥಿತಿಯಲ್ಲಿ ಅದ್ದೂರಿಯಿ೦ದ ಜರಗಿತು.

ನ೦ತರ ಬೆಳಿಗ್ಗೆ 6ರ ತನಕ ಕಲ್ಯಾಣಪುರದ ವೇದಮೂರ್ತಿ ಕೆ.ಕಾಶೀನಾಥ್ ಭಟ್,ಕೆಸೀತಾರಾಮ ಭಟ್ ರವರ ಕುಟು೦ಬದ ಸದಸ್ಯರಿ೦ದ ವೈವಿದ್ಯಮಯ ಭಜನೆಯೊ೦ದಿಗೆ ಶೆಣೈ ಕುಟು೦ಬದವರಿ೦ದ ಭಜನೆಯೊ೦ದಿಗೆ ವಿವಿಧ ಆಹ್ವಾನಿತ ಭಜನಾ ಮ೦ಡಳಿಗಳಿ೦ದ ನಿರ೦ತರ ಭಜನೆಯು ಮು೦ದುವರಿದಿದೆ.

ದೇವಾಲಯದ ದೇವರಿಗೆ ಸೇರಿದ೦ತೆ ಪರಿವಾರ ದೇವರಿಗೆ ವಿಶೇಷ ಹೂವಿನ ಅಲ೦ಕಾರವನ್ನು ಮಾಡಲಾಗಿದ್ದು ಮಧ್ಯಾಹ್ನ ಮಹಾಪೂಜೆಯೊ೦ದಿಗೆ ಸಮಾರಾಧನೆಯು ಜರಗಿತು.

ಸಾಯ೦ಕಾಲ 6ರಿ೦ದ 8ರವರೆಗೆ ಮ೦ಗಳೂರಿನ ಖ್ಯಾತ ಭಜನಾ ಕಲಾವಿದರಾದ ದಯಾಕರ ಭಟ್ ಮ೦ಗಳೂರು ಇವರಿ೦ದ ಭಕ್ತಿಸ೦ಗೀತ ಕಾರ್ಯಕ್ರಮವು ಜರಗಿತು.

ನ೦ತರ ರಾತ್ರೆ ಪೇಟೆ ಉತ್ಸವ ಹಾಗೂ ತೊಟ್ಟಿಲ ಪೂಜೆಯು ನಡೆಯಿತು.ನ೦ತರ ಆಹ್ವಾನಿತ ಭಜನಾ ಮ೦ಡಳಿಗಳಿ೦ದ ಭಜನ ಕಾರ್ಯಕ್ರಮವು ಮು೦ದುವರಿದಿದೆ.

      

No Comments

Leave A Comment