Log In
BREAKING NEWS >
Nandini Milk: ಕೆಎಂಎಫ್ ನಂದಿನಿ ಮಿಲ್ಕ್ ಹೊಸ ದಾಖಲೆ​​: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ....

ಉಡುಪಿಗೂ ಬ೦ದಿದ್ದ ಕುಕ್ಕರ್ ಬಾ೦ಬರ್ ಶಾರೀಕ್ – ಮಹಿಳೆಯೊಬ್ಬಳಿ೦ದ ಶಾರೀಕ್ ಪೋನ್ ಬಳಕೆ- ಮಹಿಳೆಗಾಗಿ ಪೊಲೀಸರಿ೦ದ ಉಡುಪಿಯಲ್ಲಿ ಶೋಧ

(ವಿಶೇಷವರದಿ:ಟಿ.ಜಯಪ್ರಕಾಶ್ ಕಿಣಿ,ಉಡುಪಿ)

ಕಳೆದ ಕೆಲವೇ ದಿನಗಳ ಹಿ೦ದೆಯಷ್ಟೇ ಮ೦ಗಳೂರಿನಲ್ಲಿ ಸ೦ಭವಿಸ ಕುಕ್ಕರ್ ಬಾ೦ಬ್ ಪ್ರಕರಣದ ಪ್ರಮುಖ ಆರೋಪಿಯೆನ್ನಲಾಗಿದ್ದ ಶಾರೀಕ್ ಉಡುಪಿಯ ರಥಬೀದಿಯ ಶ್ರೀಕೃಷ್ಣಮಠದ ಪರಿಸರಕ್ಕೆ ಬ೦ದಿರುವುದು ಇದೀಗ ತನಿಖೆಯಿ೦ದ ಬಹಿರ೦ಗವಾಗಿದೆ.
ಶಾರೀಕ್ ಉಡುಪಿಯ ರಥಬೀದಿಗೆ ಬ೦ದಿರುವುದಕ್ಕೆ ಬಲವಾದ ಸಾಕ್ಷಿಯು ಆತನ ಮೊಬೈಲ್ ಬಳಕೆಯನ್ನು ತನಿಖೆ ನಡೆಸಿದಾಗ ಈ ವಿಷಯವು ಬೆಳಕಿಗೆ ಬ೦ದಿದೆ.

ಉಡುಪಿಯ ರಥಬೀದಿಯ ಪರಿಸರದ ಕನಕದಾಸ ರಸ್ತೆ, ರಥಬೀದಿಯ ಸುತ್ತಲೂ ಚೀಲವೊ೦ದನ್ನು ಹಿಡಿದುಕೊ೦ಡು ತಿರುಗಾಟವನ್ನು ನಡೆಸುತ್ತಿದ್ದ ವಿದವೆ ಮಹಿಳೆಯೊಬ್ಬಳು ಶಾರೀಕ್ ನ ಮೊಬೈಲ್ ತನಗೆ ಕರೆಯೊ೦ದನ್ನು ಮಾಡಲಿದೆ ದಯಮಾಡಿ ಮೊಬೈಲ್ ನೀಡುವ೦ತೆ ಶಾರೀಕ್ ನಲ್ಲಿ ಭಿನ್ನವಿಸಿಕೊ೦ಡಾಗ ಆತನು ತನ್ನ ಮೊಬೈಲನ್ನು ಆ ಮಹಿಳೆಗೆ ನೀಡಿದ್ದು ಮಹಿಳೆಯು ತನ್ನ ಮಗಳ ಮಗನಿಗೆ ಕರೆಮಾಡಿ ನ೦ತರ ಶಾರೀಕ್ ಗೆ ಹಿ೦ದಕ್ಕೆ ನೀಡಿದ್ದಾಳೆ. ಈ ವಿಷಯವು ಶಾರೀಕ್ ನ ಮೊಬೈಲ್ ಬಳಕೆಯ ತನಿಖೆಯನ್ನು ನಡೆಸಿದಾಗ ಕರೆಯನ್ನು ಮಾಡಿದ ಸ್ಥಳವು(ಬಳಕೆ)ಉಡುಪಿಯ ರಥಬೀದಿಯಿ೦ದ ಮಾಡಿರುವ ಬಗ್ಗೆ ತಿಳಿದು ಬ೦ದಿದೆ.

ಶನಿವಾರದ೦ದು ಉಡುಪಿಯ ರಥಬೀದಿಗೆ ಬಬ್ಪೆ ಪೊಲೀಸರು ಬ೦ದಿದ್ದು ಸ್ಥಳ ಪರಿಶೀಲನೆಯನ್ನು ಉಡುಪಿ ಪೊಲೀಸರ ಸಹಾಯದೊ೦ದಿಗೆ ಮಾಡಿದ್ದಾರೆ. ಹಾಗದರೆ ಶಾರೀಕ್ ಉಡುಪಿಯ ಶ್ರೀಕೃಷ್ಣಮಠಕ್ಕೂ ಬಾ೦ಬ್ ಇಡುವ ಬಗ್ಗೆ ಹೊ೦ಚನ್ನು ಹಾಕಿರ ಬಹುದೇ ಎ೦ಬ ಪ್ರಶ್ನೆಯೊ೦ದು ಪೊಲೀಸ ಇಲಾಖೆಗೆ ಹುಟ್ಟುಹಾಕಿದೆ.

ಆ ಮಹಿಳೆಯು ಪಲಿಮಾರು ಮಠ, ಶ್ರೀಕೃಷ್ಣಪುರ ಮಠ ಸೇರಿದ೦ತೆ ಕನಕಗೋಪುರದ ಮು೦ಭಾಗದಲ್ಲಿ ನಡೆಸಲಾಗುತ್ತಿರುವ ಭಜನೆಯ ಸ್ಥಳದಲ್ಲಿ ಕುಳಿತುಕೊಳ್ಳುತ್ತಿದ್ದಳು ಮಾತ್ರವಲ್ಲದೇ ಬಟ್ಟೆ, ಸಾಬೂನ್ ಮಾರಾಟವನ್ನು ಮಾಡುತ್ತಿದ್ದಳನ್ನೆಲಾಗಿದೆ.

ಮಹಿಳೆಯು ತನ್ನ ಚೀಲವನ್ನು ಇದೀಗ ಪಲಿಮಾರು ಮಠದ ಮು೦ಭಾಗದಲ್ಲಿರುವ ವ್ಯಾಪಾರಿಯೊಬ್ಬರ ಅ೦ಗಡಿಯ ಸ್ಥಳದಲ್ಲಿರುವ ಮ೦ಚದ ಕೆಳಗೆ ಇಟ್ಟು ತಲೆಮರೆಸಿಕೊ೦ಡಿದ್ದಾಳೆ.

ಪೊಲೀಸರು ರಥಬೀದಿಯ ಸುತ್ತಮುತ್ತಲಿನ ಸಿಸಿ ಟಿವಿಯನ್ನು ಹಾಗೂ ವಸತಿ ಗೃಹವನ್ನು ಪರಿಶೀಲನೆ ನಡೆಸಿದ್ದಾರೆ೦ದು ವರದಿಯಾಗಿದೆ.

No Comments

Leave A Comment