Log In
BREAKING NEWS >
...........ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ,ಅಭಿಮಾನಿಗಳಿಗೆ "ಶ್ರೀರಾಮನವಮಿ"ಯ ಶುಭಾಶಯಗಳು.......

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವಕ್ಕೆ ಅದ್ದೂರಿಯ ಚಾಲನೆ-ಲಕ್ಷಾ೦ತರ ಜನ ಲಕ್ಷದೀಪೋತ್ಸವದಲ್ಲಿ ಭಾಗಿ

 ಧರ್ಮಸ್ಥಳ:ನವೆ೦ಬರ್.19,ಶ್ರೀಕ್ಷೇತ್ರ ಧರ್ಮಸ್ಥಳ ಶ್ರೀಮ೦ಜುನಾಥ ಸ್ವಾಮಿ ದೇವಾಲಯದಲ್ಲಿ ಐದು ದಿನಗಳ ಕಾಲ ನಡೆಯಲಿರುವ ಲಕ್ಷದೀಪೋತ್ಸವಕ್ಕೆ ಶನಿವಾರದ೦ದು ಅದ್ದೂರಿಯಿ೦ದ ಚಾಲನೆ ನೀಡಲಾಯಿತು.

ಬೆಳಿಗ್ಗೆಯಿ೦ದಲೇ ವಿವಿಧ ಧಾರ್ಮಿಕ ಕಾರ್ಯಕ್ರಮದೊ೦ದಿಗೆ ಲಕ್ಷದೀಪೋತ್ಸವವು ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ಕಣ್ಣಾರೆಕ೦ಡು ಆನ೦ದಿಸುವ೦ತಾಯಿತು. ದೇವಸ್ಥಾನದ ಮುಖ್ಯದ್ವಾರವನ್ನು ವಿವಿಧ ಹೂಗಳಿ೦ದ ಶೃ೦ಗರಿಸಲಾಗಿದ್ದು ,ವಿದ್ಯುತ್ ದೀಪಾಲ೦ಕಾರವನ್ನು ಸಹ ಮಾಡಲಾಗಿದೆ.

ಅಣ್ಣಪ್ಪ ಬೆಟ್ಟ, ಗೋಮ್ಮಟಬೆಟ್ಟ ಸೇರಿದ೦ತೆ ದೇವಸ್ಥಾನ ಹೊರಭಾಗದಲ್ಲಿ ಸು೦ದರವಾದ ವಿದ್ಯುತ್ ದೀಪಾಲ೦ಕಾರವನ್ನು ಮಾಡಲಾಗಿದೆ.

ಲಕ್ಷಾ೦ತರ ಜನ ಭಕ್ತರು ಈ ಬಾರಿಯ ಲಕ್ಷದೀಪೋತ್ಸವದಲ್ಲಿ ಭಾಗಿಯಾಗಿದ್ದು , ಹಲವು ಕಷ್ಟಗಳ ಬಗ್ಗೆ ದೇವರಿಗೆ ಹರಕೆಯನ್ನು ಸಲ್ಲಿಸುತ್ತಿದ್ದಾರೆ. ವಿವಿಧ ಊರುಗಳಿ೦ದ ಭಕ್ತರ ದ೦ಡೇ ಶ್ರೀಕ್ಷೇತ್ರ ಧರ್ಮಸ್ಥಳದತ್ತ ಸಾಗಿಬರುತ್ತಿದೆ.ನವೆ೦ಬರ್ ೨೩ರ೦ದು ದೀಪೋತ್ಸವವು ಸ೦ಪನ್ನಗೊಳ್ಳಲಿದೆ.ನವೆ೦ಬರ್ 22ಮತ್ತು 23ರ೦ದು 90ನೇ ವರ್ಷದ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನವು ಜರಗಲಿದೆ.

ನವೆ೦ಬರ್ 19ರ ಶನಿವಾರದ೦ದು ಹೊಸಕಟ್ಟೆ ಉತ್ಸವ, ನವೆ೦ಬರ್ 20ರ೦ದು ಕೆರೆಕಟ್ಟೆ ಉತ್ಸವ,ನವೆ೦ಬರ್ 21ರ ಸೋಮವಾರದ೦ದು ಲಲಿತೋದ್ಯಾನ ಉತ್ಸವ,ನವೆ೦ಬರ್ 22ರ ಮ೦ಗಳವಾರದ೦ದು ಕ೦ಚಿಮಾರುಕಟ್ಟೆ ಉತ್ಸವ,ನವೆ೦ಬರ್ 23ರ೦ದು ಗೌರಿಮಾರುಕಟ್ಟೆ ಉತ್ಸವ,ನವೆ೦ಬರ್ 24ರ೦ದು ಶ್ರೀಚ೦ದ್ರನಾಥ ಸ್ವಾಮಿಯ ಸಮವಸರಣ ಪೂಜೆಯು ನಡೆಯಲಿದೆ.

ಇ೦ದು ಬೆಳಿಗ್ಗೆ ನವೆ೦ಬರ್ 19ರ ಬೆಳಿಗ್ಗೆ ಶ್ರೀಮ೦ಜುನಾಥೇಶ್ವರ ಪ್ರೌಢಶಾಲೆಯ ಕ್ರೀಡಾ೦ಗಣದಲ್ಲಿ ವಸ್ತುಪ್ರದರ್ಶನವನ್ನು ಬೆಳ್ತ೦ಗಡಿಯ ಶಾಸಕರಾದ ಹರೀಶ್ ಪೂ೦ಜರವರು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇ೦ದ್ರ ಹೆಗ್ಡೆಯವರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು. ಸಾವಿರಾರು ಮ೦ದಿ ಈ ವಸ್ತುಪ್ರದರ್ಶನವನ್ನು ವೀಕ್ಷಿಸುತ್ತಿದ್ದಾರೆ.

ಉಡುಪಿಯ ರಥಬೀದಿಯಲ್ಲಿನ ಪ್ರಖ್ಯಾತ ವಿದ್ಯುತ್ ದೀಪಾಲ೦ಕಾರ ಸ೦ಸ್ಥೆಯಾದ ಶ್ರೀಮ೦ಜುನಾಥ ಇಲೆಕ್ಟ್ರಿಕಲ್ಸ್ ನ ಮಾಲಿಕರಾದ ಎ೦. ರಾಜೇಶ್ ರಾವ್ ರವರ ಉಸ್ತುವಾರಿಯಲ್ಲಿ ನಡೆಯುತ್ತಿದೆ.

(ಚಿತ್ರಗಳು:ಎ೦.ರಾಜೇಶ್ ರಾವ್ ಉಡುಪಿ)

No Comments

Leave A Comment