Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಕಲ್ಯಾಣಪುರ ಶ್ರೀ ರಾಮಾಂಜೇನೆಯ ದೇವರಿಗೆ ಲಕ್ಷ ತುಳಸಿ ಅರ್ಚನೆ

ಕಲ್ಯಾಣಪುರ ; ಶ್ರೀ ರಾಮಾಂಜೇನೆಯ ದೇವಸ್ಥಾನ ಕಲ್ಯಾಣಪುರ ದೇವಳದ ಟ್ರಸ್ಟ್ ವತಿಯಿಂದ ಭಾನುವಾರದ೦ದು ಲಕ್ಷ ತುಳಸಿ ಅರ್ಚನೆ ಹಾಗೂ ಲಕ್ಷ ಕುಂಕುಮಾರ್ಚನೆ ನಡೆಯಿತು.

ಅರ್ಚಕರಾದ ಶ್ರೀಕಾಂತ್ ಅವಧಾನಿ ಯವರ ಮಾರ್ಗದರ್ಶನ ದಲ್ಲಿ ಧಾರ್ಮಿಕ ಪೂಜಾ ವಿಧಾನಗಳನ್ನು ನೆಡೆಸಿಕೊಟ್ಟರು ಕಾಶೀನಾಥ ಭಟ್ , ಸೀತಾರಾಮ್ ಭಟ್ , ಗಣಪತಿ ಭಟ್ ,ಮಹೇಶ್ ಭಟ್ ,ಗಣೇಶ ಭಟ್ , ಶ್ರೀಕರ್ ಭಟ್ , ಪವನ್ ಭಟ್ ಸಹಕಾರ ದೊಂದಿಗೆ ಲಕ್ಷ ತುಳಸಿ ಅರ್ಚನೆ ನೆಡೆಯಿತು . ಮಹಿಳಾ ಸದಸ್ಯರಿಂದ ಲಕ್ಷ ಕುಂಕುಮಾರ್ಚನೆ ,ಭಜನಾ ಕಾರ್ಯ ಕ್ರಮ ಜರಗಿತು ಮಹಾ ಪೂಜೆ ಬಳಿಕ ಪ್ರಸಾದ ವಿತರಣೆ ನೆಡೆಯಿತು ನೂರಾರು ಭಕ್ತರೂ ಉಪಸ್ಥಿತರಿದ್ದರು.

No Comments

Leave A Comment