Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿ:ಬನ್ನ೦ಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಶತರುದ್ರಾಭಿಷೇಕ , ನವಕ ಪ್ರಧಾನ ಪೂರ್ವಕ – ರುದ್ರ ಯಾಗ ಸ೦ಪನ್ನ …

ಉಡುಪಿ: ಉಡುಪಿಯ ಬನ್ನ೦ಜೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ವಾಗಿ ಶ್ರೀ ದೇವರ ಸನ್ನಿಧಿಯಲ್ಲಿ ಸೋಮವಾರ ದೇವಳದ ತಂತ್ರಿಗಳಾದ ಶ್ರೀನಿವಾಸ ತಂತ್ರಿ ಗಳ ನೇತೃತ್ವದಲ್ಲಿ ಶತ ರುದ್ರಾಭಿಷೇಕ , ನವಕ ಪ್ರಧಾನ ಪೂರ್ವಕ – ರುದ್ರ ಯಾಗ – ನೆಡೆಯಿತು .

ಬೆಳ್ಳಿಗೆ 8 ಕ್ಕೆ ಸಾಮೂಹಿಕ ಪ್ರಾಥನೆ , 11 ಕ್ಕೆ ಪೂರ್ಣಾಹುತಿ , ಮಹಾಪೂಜೆ , ಶ್ರೀ ದೇವರ ಸನ್ನಿಧಿಯಲ್ಲಿ ನೂರಾರು ಸೀಯಾಳ ಅಭಿಷೇಕ , ಪಂಚಾಮೃತ ಅಭಿಷೇಕ , ವಿಶೇಷ ಹೂವಿನ ಅಲಂಕಾರ , ಭಜನಾ ಕಾರ್ಯಕ್ರಮ ನೆಡೆಯಿತು.

ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ರಾಮ್ ಬನ್ನಂಜೆ , ಅರ್ಚಕರಾದ ವಾಸುದೇವ ಉಪದ್ಯಾ , ನಗರ ಸಭಾ ಸದಸ್ಯರಾದ ಸವಿತಾ ಹರೀಶ್ ರಾಮ್ , ಟಿ ಜಿ ಹೆಗ್ದೆ , ಸುರೇಶ ಸೇರಿಗಾರ , ವಿಠಲ್ ಶೆಟ್ಟಿ , ದಯಾನಂದ ಕಲ್ಮಾಡಿ , ಭುಜಂಗ ಶೆಟ್ಟಿ , ಸುಧಾಕರ್ ಮಲ್ಯ , ಅನುಪಮಾ ಆನಂದ ಸುವರ್ಣ , ಅಷ್ವಿನಿ ಶೆಟ್ಟಿ , ಮಹಾ ಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಸಾವಿರಾರು ಭಕ್ತರೂ ಪಾಲ್ಗೊಂಡರು .

No Comments

Leave A Comment