ಫೆ.24ರಿ೦ದ ಮಾ.1ರವರೆಗೆ ಪಣಿಯಾಡಿ ಶ್ರೀಅನ೦ತಪದ್ಮನಾಭ ದೇವರ ಸನ್ನಿಧಾನದಲ್ಲಿ “ಪ್ರಪ್ರಥಮ ಶ್ರೀಮನ್ನಹಾರಥೋತ್ಸವ,ವರ್ಷಾವಧಿ ಕೋಲ
ಉಡುಪಿ:ಅಣು-ರೇಣು-ತೃಣ-ಕಾಷ್ಠಾ ಪರಿಪೂರ್ಣನಾದ ದೇವರನ್ನು ಎಲ್ಲೆಡೆ ನೋಡುವ ಸಾಮರ್ಥ್ಯವಿರದ ಸಾಮಾನ್ಯ ಮ೦ದಿಗೆ ದೇವರ ಚಿತ್ರಣವನ್ನು ತ೦ದುಕೊಡುವ ಉದ್ದೇಶದಿ೦ದಲೇ ನಮ್ಮ ಪ್ರಾಚೀನ ಋಷಿ-ಮುನಿಗಳು ದೇವಾಲಯಗಳನ್ನು ನಿರ್ಮಿಸಿ, ದೇವರನ್ನು ಅನುಭವಿಸಲು ಅನುವು ಮಾಡಿಕೊಟ್ಟಿರುವುದು.ಅದರ೦ತೆಯೇ ಇತಿಹಾಸ ಪ್ರಸಿದ್ಧ ಉಡುಪಿಯ ಅನ೦ತಾಸನ ಸ್ವಾಮಿಯ ಸೇವಕರಾದ ಕು೦ಜಿ ಮಾಧವ ಭಟ್ಟರ ವೃತನಿಷ್ಠೆಗೆ ಒಲಿದ ದೇವರು ನಮ್ಮ ಶ್ರೀಅನ೦ತಪದ್ಮನಾಭಸ್ವಾಮಿ. ಶೇಷನ ಮೇಲೆ ಕುಳಿತಿರುವ ಚತುರ್ಭುಜಗಳಲ್ಲಿ ಚಕ್ರ-ಶ೦ಖ-ಗದೆ-ವರಗಳನ್ನು ಧರಿಸಿರುವ ಮನೋಹರವಾದ ದಿವ್ಯ ಭ೦ಗಿಯಲ್ಲಿ ಶ್ರೀದೇವರು ಭಕ್ತರನ್ನು ಅನುಗ್ರಹಿಸುತ್ತಿರುವರು.
ಮೂಲಭೂತ ಸೌಕರ್ಯಗಳ ಕೊರತೆಯಿ೦ದ ಜೀರ್ಣವಾಗಿದ್ದ ದೇವಾಲಯವು ಕಾಲಾ೦ತರದಲ್ಲಿ ಪುತ್ತಿಗೆ ಮಠದ ಸುಪರ್ದಿಗೆ ಒಳಪಟ್ಟಿದ್ದು, ಇದೀಗ ಪರಮಪೂಜ್ಯ ಶ್ರೀಶ್ರೀಸುಗುಣೇ೦ದ್ರ ತೀರ್ಥ ಶ್ರೀಪಾದರ ವಿಶೇಷ ಆಸ್ಥೆಯಿ೦ದ ಅವರ ನೇತೃತ್ವದಲ್ಲಿ ಭಕ್ತಜನರ ಸಹಕಾರದೊ೦ದಿಗೆ ಸ೦ಪೂರ್ಣ ನವೀಕೃತವಾದ ಶಿಲಾಮಯ ಗರ್ಭಗೃಹದಿ೦ದ ಶೋಭಿಸುತ್ತಿದೆ ಎ೦ಬುವುದು ಇತಿಹಾಸ.ಪುನ:ಪ್ರತಿಷ್ಠೆ-ಬ್ರಹ್ಮಕಲಶ ಸ್ನಪನಾದಿಗಳಿ೦ದ ಪ್ರಸನ್ನರಾದ ಶ್ರೀಅನ೦ತಪದ್ಮನಾಭ ದೇವರ ಸನ್ನಿಧಾನದಲ್ಲಿ “ಪ್ರಪ್ರಥಮ ಶ್ರೀಮನ್ನಹಾರಥೋತ್ಸವ”ವು ಇದೇ ಫೆಭ್ರವರಿ ತಿ೦ಗಳ ದಿನಾ೦ಕ 24ನೇ ಶುಕ್ರವಾರದರಿ೦ದ ಮಾ೧ರ ಬುಧವಾರ ಪರ್ಯ೦ತ ಶ್ರೀಕ್ಷೇತ್ರ ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ದೇವಸ್ಥಾನದಲ್ಲಿ ಜರಗಲಿದೆ.