Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಕಿಡ್ನಿ ಸಮಸ್ಯೆ ಕೆಎಂಸಿ ಆಸ್ಪತ್ರೆಯಲ್ಲಿದ್ದ ವ್ಯಕ್ತಿಗೆ ಹುಟ್ಟುಹಬ್ಬದ ದಿನದಂದು ಭಾಸ್ಕರ್ ಸೇರಿಗಾರ್ ರವರಿ೦ದ ಧನಸಹಾಯದ ಚೆಕ್ ವಿತರಣೆ

ಉಡುಪಿ:ಪೆರಂಪಳ್ಳಿ ವ್ಯಕ್ತಿಯಾದ ಅರುಣ್ ರವರು ಕಿಡ್ನಿ ಸಮಸ್ಯೆಯಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅವರ ಹೆಚ್ಚಿನ ಚಿಕಿತ್ಸೆಗಾಗಿ ಅವರ ಪತ್ನಿ ಸವಿತಾ ರವರಿಗೆ ಸೋಮವಾರ ದಿನಾ೦ಕ 30-01-2023ರ ಮಹಿಷ ಮರ್ದಿನಿ ಲ್ಯಾಂಡ್ ಲಿಂಕ್ಸ್ ನ ಮಾಲಕರಾದ ಭಾಸ್ಕರ್ ಸೇರಿಗಾರ್ ರವರ ಹುಟ್ಟುಹಬ್ಬದ ಪ್ರಯುಕ್ತ ಅಲೆವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದಲ್ಲಿ ಚಂಡಿಕಯಾಗ ಮತ್ತು ಹೂವಿನ ಪೂಜೆ ಯನ್ನು ನೀಡುವುದರೊ೦ದಿಗೆ ರಾತ್ರಿ “ಕಾಂತರಾ”ಚಲನಚಿತ್ರವನ್ನು ಎಲ್ಇಡಿ ಕಾರ್ಯಕ್ರಮದಲ್ಲಿ ಉಡುಪಿಯ ಯಶೋಧ ಆಟೋ ಯೂನಿಯನ್ ನ ಮನವಿಯ ಮೇರೆಗೆ ವಿಶಿಷ್ಟ ರೀತಿಯಲ್ಲಿ ಅವರಿಗೆ ಸಹಾಯ ಮಾಡಿ ಹುಟ್ಟುಹಬ್ಬವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಶ್ಯಾಮಲಾ ಮತ್ತು ಕೀರ್ತೇಶ್ ಶ್ರೀಮತಿ ಮಾಲಾ ಹಾಗೂ ಯೂನಿಯನ್ ಸದಸ್ಯರುಗಳಾದ ಪ್ರವೀಣ್ ಕುಂಜಿಬೆಟ್ಟು,ಹರೀಶ್ ಅಮೀನ್, ಶ್ರೀನಿವಾಸ್ ಕಪ್ಪೆಟು, ಹರೀಶ್ ಕಾಂಚನ್,ಸಂತೋಷ್ ಶೇರಿಗಾರ್, ಸದಾನಂದ ಸೇರಿಗಾರ್, ಪ್ರಸಾದ್ ಆಚಾರ್ಯ,ರವಿ ರಥಬೀದಿ ಇವರು ಉಪಸ್ಥಿತರಿದ್ದರು.

No Comments

Leave A Comment