Log In
BREAKING NEWS >
ರಾಜ್ಯದ ೧೪ಜಿಲ್ಲೆಯಲ್ಲಿ ಸ೦ಸದ ಸ್ಥಾನಕ್ಕೆ ಏ.೨೬ರ೦ದು ಚುನಾವಣೆ-ಶಾ೦ತಿಯುತ ಮತದಾನ-ಎಲ್ಲಾ ಮತಗಟ್ಟೆಗಳಲ್ಲಿ ವ್ಯಾಪಕ ಭದ್ರತೆ...

ಕಾಶೀ ಮಠಾಧೀಶರಿ೦ದ ಭಜನಾ ಸಪ್ತಾಹದ ರಜತ ಪೌಳಿ ಮ೦ಟಪ ಉದ್ಘಾಟನೆ…

ಉಡುಪಿ:ಉಡುಪಿ ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನಕ್ಕೆ ಶನಿವಾರದ೦ದು ಶ್ರೀ ಸಂಸ್ಥಾನ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಭೇಟಿ ನೀಡಿ ಶ್ರೀ ಲಕ್ಷ್ಮೀ ವೆಂಕಟೇಶ ದೇವರಿಗೆ ನೂತನ ಸುವರ್ಣ ಖಚಿತ ಶ್ರೀಲಕ್ಷ್ಮೀಹಾರ ಸಮರ್ಪಣೆ ಮಾಡಿದರು.
ಶ್ರೀ ದೇವರಿಗೆ ವಿಶೇಷ ಅಲಂಕಾರ , ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನೆಡೆಯಿತು ಭಜನಾ ಸಪ್ತಾಹ ಪೌಳಿಯಲ್ಲಿ ನೂತನವಾಗಿ ನಿರ್ಮಿಸಿದ ರಜತ ಅಲಂಕಾರಿಕ ಮಂಟಪ ವನ್ನು ಪೂಜ್ಯ ಶ್ರೀಗಳ ಆರತಿ ಬೆಳಗಿಸಿ ಶನಿವಾರದ೦ದು ಉದ್ಘಾಟಿಸಿದರು.

ಧಾರ್ಮಿಕ ಪೂಜಾವಿಧಾನಗನ್ನು ಚೇಂಪಿ ಶ್ರೀಕಾಂತ್ ಭಟ್ ನೆರವೇರಿಸಿದರು . ದೇವಳದ ಆಡಳಿತ ಮೊಕ್ತೇಸರ ಪಿ ವಿ ಶೆಣೈ , ವಸಂತ ಕಿಣಿ , ವಿಶ್ವನಾಥ ಭಟ್ , ಪ್ರಕಾಶ್ ಶೆಣೈ , ದೇವದಾಸ್ ಪೈ ,ಅಶೋಕ ಬಾಳಿಗಾ ,ಗಣೇಶ ಕಿಣಿ , ರೋಹಿತಾಕ್ಷ ಪಡಿಯಾರ್ , ಪುಂಡಲೀಕ್ ಕಾಮತ್ , ಪ್ರಕಾಶ್ ಭಕ್ತ , ಉಮೇಶ್ ಪೈ , ನಾರಾಯಣ ಪ್ರಭು , ಅರ್ಚಕ ರಾದ ವಿನಾಯಕ ಭಟ್ , ದಯಾಘನ್ ಭಟ್ ,ದೀಪಕ್ ಭಟ್ ,ರವೀಂದ್ರ ಭಟ್ , ಗಿರೀಶ್ ಭಟ್, ಭಜನಾ ಸಪ್ತಾಹ ಸಮಿತಿಯ ಸದಸ್ಯರು ಹಾಗೂ ಜಿ ಎಸ್ ಬಿ ಯುವಕ ಮತ್ತು ಮಹಿಳಾ ಮಂಡಳಿ ಸದಸ್ಯರು , ಹಾಗೂ ಸಮಾಜಭಾಂದವರು ಉಪಸ್ಥಿತರಿದ್ದರು.

No Comments

Leave A Comment