Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ದೇವರಿಗೆ ಲಕ್ಷತುಳಸಿ ಅರ್ಚನೆ-ದೀಪೋತ್ಸವ ಸ೦ಪನ್ನ

ಕು೦ಜಿಬೆಟ್ಟು:ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅ೦ಗವಾಗಿ ಭಾನುವಾರದ೦ದು ವಿಪ್ರ ಬಳಗದವರಿ೦ದ ವಿಶೇಷ ಲಕ್ಷ ತುಳಸಿ ಅರ್ಚನೆ , ಭಜನಾ ಕಾರ್ಯಕ್ರಮ, ರ೦ಗಪೂಜೆ, ಉತ್ಸವ ಬಲಿಕಾರ್ಯಕ್ರಮದೊ೦ದಿಗೆ ದೀಪಾರಾಧನೆ ವಿಶೇಷ ದೀಪೋತ್ಸವವು ಅದ್ದೂರಿಯಿ೦ದ ಜರಗಿತು.

ಪುತ್ತಿಗೆ ಮಠದ ಎ೦.ನಾಗರಾಜ್ ಆಚಾರ್ಯ, ಬ್ರಹ್ಮಕಲಶೋತ್ಸವ ಸಮಿತಿಯ ಎಸ್ ನಾರಾಯಣ ಮಡಿ, ಎ೦.ವಿಶ್ವನಾಥ್ ಭಟ್,ಬಿ ವಿಜಯರಾಘವ ರಾವ್, ಪಣಿಯಾಡಿ ಶ್ರೀನಿವಾಸ ಆಚಾರ್ಯ,ಪಣಿಯಾಡಿ ಶ್ರೀಧರ ಭಟ್, ವಿಠಲ ಮೂರ್ತಿ ಆಚಾರ್ಯ,ಭಾರತೀ ಕೃಷ್ಣಮೂರ್ತಿ,ರಾಜೇಶ್ ಭಟ್, ಪಳ್ಳಿ ಲಕ್ಷ್ಮೀನಾರಾಯಣ ಹೆಗ್ಡೆ, ತಲ್ಲೂರು ಚ೦ದ್ರಶೇಖರ್ ಶೆಟ್ಟಿ, ನಾಗರಾಜ್ ಪಣಿಯಾಡಿ,ಮಿತೇಶ್ ಪಣಿಯಾಡಿ ಹಾಗೂ ಭಕ್ತರು ಹಾಜರಿದ್ದರು.

No Comments

Leave A Comment