Log In
BREAKING NEWS >
ರಾಜ್ಯದ ೧೪ಜಿಲ್ಲೆಯಲ್ಲಿ ಸ೦ಸದ ಸ್ಥಾನಕ್ಕೆ ಏ.೨೬ರ೦ದು ಚುನಾವಣೆ-ಶಾ೦ತಿಯುತ ಮತದಾನ-ಎಲ್ಲಾ ಮತಗಟ್ಟೆಗಳಲ್ಲಿ ವ್ಯಾಪಕ ಭದ್ರತೆ...

ಮಂತ್ರಾಲಯ ಗುರು ರಾಯರ ಸನ್ನಿಧಾನಕ್ಕೆ ರಾಹುಲ್ ಗಾಂಧಿ ಭೇಟಿ, ವಿಶೇಷ ಪೂಜೆ

ಆಂಧ್ರಪ್ರದೇಶ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ರಾತ್ರಿ ಮಂತ್ರಾಲಯದಲ್ಲಿರುವ ಪ್ರಸಿದ್ಧ ಗುರು ರಾಘವೇಂದ್ರ ಸ್ವಾಮಿಯ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಭಾರತ್ ಜೋಡೋ ಯಾತ್ರೆಯ 43 ನೇ ದಿನವಾದ ಗುರುವಾರ ರಾಹುಲ್ ಗಾಂಧಿ, ತಮ್ಮ ದಿನದ ವೇಳಾಪಟ್ಟಿಯ ಕೊನೆಯಲ್ಲಿ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನ ದರ್ಶನ ಪಡೆದರು.

ಇದಕ್ಕೂ ಮುನ್ನ ಮುಗಟಿ, ಹಾಲಹರವಿಯಲ್ಲಿ ಐಕ್ಯತಾ ಯಾತ್ರೆ ನಡೆಸಿದರು. ಗುರುವಾರ ರಾತ್ರಿ ಮಂತ್ರಾಲಯದಲ್ಲಿಯೇ ತಂಗಿದ್ದ ರಾಹುಲ್ ಗಾಂಧಿ, ಶುಕ್ರವಾರ ಬೆಳಗ್ಗೆ ಮಂತ್ರಾಲಯದಿಂದ ಕರ್ನಾಟಕವನ್ನು ಮತ್ತೊಮ್ಮೆ ಪ್ರವೇಶಿಸಲಿದ್ದು, ಯಾತ್ರೆ ಮುಂದುವರೆಸಲಿದ್ದಾರೆ.

No Comments

Leave A Comment