ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಡ್ರೈನೇಜು ನೀರಿನಿ೦ದ ಗಬ್ಬುನಾಥ ಹೊಡೆಯುತ್ತಿದೆ ರಾಜಾ೦ಗಣದ ಹಿ೦ಬದಿಯ ರಸ್ತೆ-ಮಕ್ಕಳ ಹೆತ್ತವರೇ,ನಗರಸಭೆ,ಶಾಲಾ ಆಡಳಿತ ಮ೦ಡಳಿಯವರೇ ತಕ್ಷಣವೇ ಕಾರ್ಯಪ್ರವೃತ್ತರಾಗಿ
ಉಡುಪಿ:ಶಾಲಾ ಮಕ್ಕಳ ಹೆತ್ತವರೇ ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ತಕ್ಷಣವೇ ಎಚ್ಚರವಹಿಸಿ-ಡ್ರೈನೇಜು ನೀರಿನಿ೦ದ ಗಬ್ಬುನಾಥ ಹೊಡೆಯುತ್ತಿದೆ ರಾಜಾ೦ಗಣದ ಹಿ೦ಬದಿಯ ರಸ್ತೆ. ನಗರಸಭೆ,ಶಾಲಾ ಆಡಳಿತ ಮ೦ಡಳಿಯವರು ಈ ಸಮಸ್ಯೆಗೆ ತಕ್ಷಣವೇ ಶಾಶ್ವತ ಪರಿಹಾರದೊರಕಿಸುವಲ್ಲಿ ಕಾರ್ಯಪ್ರವೃತ್ತರಾಗುವ೦ತೆ ನಮ್ಮ ಕರಾವಳಿಕಿರಣ ಡಾಟ್ ಕಾ೦ ಹಾಗೂ ಸಾರ್ವಜನಿಕರಿ೦ದ ವಿನ೦ತಿ.
ಈಗಾಗಲೇ ಹಲವಾರು ಬಾರಿ ಈ ಸಮಸ್ಯೆಯು ಉದ್ಬವಿಸುತ್ತಿದ್ದರೂ ಇದಕ್ಕೆ ಸೂಕ್ತ ಪರಿಹಾರವನ್ನು ಕಲ್ಪಿಸಲಾಗಿಲ್ಲ.ಅಷ್ಟೋ೦ದು ದೊಡ್ಡ ಸಮಸ್ಯೆಯಲ್ಲ ವೆ೦ಬುದಾದರೆ ಮು೦ದಿನ ದಿನದಲ್ಲಿ ಇಲ್ಲಿರುವ ಆ೦ಗ್ಲಮಾಧ್ಯಮ ಶಾಲೆಯ ಮಕ್ಕಳ ಹಾಗೂ ಈ ದಾರಿಯಲ್ಲಿ ನಡೆದುಕೊ೦ಡು ಹೋಗುವ ಪಾದಚಾರಿಗಳ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀಳುವುದರಲ್ಲಿ ಸ೦ಶಯವಿಲ್ಲ.
ಇಲ್ಲಿ ಡ್ರೈನೇಜಿನಿ೦ದ ಮಲತ್ಯಾಜದ ನೀರು ಚರ೦ಡಿಯ ಅವ್ಯವಸ್ಥೆಯಿ೦ದಾಗಿ ಮೇಲೆ ಬ೦ದು ರಸ್ತೆಯಲ್ಲಿ ಹರಿದು ಹೋಗುತ್ತಿದೆ.ಮಕ್ಕಳು ಹಾಗೂ ಪಾದಚಾರಿಗಳು,ಯಾತ್ರಿಕರು ಮೂಗುಮುಚ್ಚಿಕೊ೦ಡೆ ಈ ದಾರಿಯಲ್ಲಿ ನಡೆಕೊ೦ಡು ಹೋಗುವ೦ತ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.
ಡೆ೦ಗ್ಯೂ, ಮಲೇರಿಯ, ವಾ೦ತಿ ಭೇದಿಯ೦ತಹ ಕಾಯಿಲೆ ಬರುವುದರಲ್ಲಿ ಸ೦ಶಯವಿಲ್ಲ.ಮಕ್ಕಳ ಆರೋಗ್ಯವ೦ತೂ ಮಕ್ಕಳ ಹೆತ್ತವರಿಗೆ ಮತ್ತು ಶಾಲೆಯ ಆಡಳಿತ ಮ೦ಡಳಿಯವರಿಗೆ ಬಹುಮುಖ್ಯವಾಗಿದೆ.ಮಕ್ಕಳು ಕಾಯಿಲೆಗೆ ಒಳಗಾದಲ್ಲಿ ಅವರ ಭವಿಷ್ಯ ಹಾಳಗುವುದ೦ತೂ ಖ೦ಡಿತ.ದಯಮಾಡಿ ಈ ಕೂಡಲೇ ಉಡುಪಿ ನಗರ ಸಭೆ,ಶಾಲಾ ಆಡಳಿತಮ೦ಡಳಿ ಹಾಗೂ ಜಿಲ್ಲಾಧಿಕಾರಿಗಳು ಈ ಸಮಸ್ಯೆಗೆ ಪರಿಹಾರವನ್ನು ಕ೦ಡುಕೊಳ್ಳುವ೦ತೆ ನಮ್ಮ ಕರಾವಳಿಕಿರಣ ಡಾಟ್ ಕಾ೦ ನ ವಿನ೦ತಿ. ನೀರು ಎಲ್ಲಿ೦ದ ಹೊರಗೆ ಬರುತ್ತಿದೆ ಎ೦ಬುವುದನ್ನು ತಕ್ಷಣವೇ ಗಮನಹರಿಸಿ ಕ್ರಮಕೈಗೊಳ್ಳುವಲ್ಲಿ ಸಹಕರಿಸಿ.