ಉಡುಪಿ: ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿ ವಾಡಿಕೆಯ೦ತೆ ಕಾರ್ತಿಕಮಾಸದಲ್ಲಿ ನಡೆಯಲಿರುವ ಲಕ್ಷದೀಪೋತ್ಸವವು ನವೆ೦ಬರ್ 7ರ ಶುಕ್ರವಾರದ೦ದು ಜರಗಲಿದೆ. ವನಪೂಜೆ,ಮಧ್ಯಾಹ್ನ ಪೂಜೆ,ವನಭೋಜನ,ರಾತ್ರಿಪೂಜೆ, ಕೆರೆಉತ್ಸವದೊ೦ದಿಗೆ ಪೇಟೆ ಉತ್ಸವದೊ೦ದಿಗೆ ಕಟ್ಟೆ ಪೂಜೆ,ರಾತ್ರಿ ಬೀಡಿನಗುಡ್ಡೆಯಲ್ಲಿ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಲಿದೆ.

ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾದ ತಂದೆ : ಸಾರ್ವಜನಿಕರಿಂದ ರಕ್ಷಣೆ

ಮಂಗಳೂರು: ನಗರದಲ್ಲಿ ತಂದೆ ಯೋರ್ವರು ತನ್ನ ಪುಟ್ಟ ಮಗುವಿನೊಂದಿಗೆ ಗುರುಪುರ ನದಿಗೆ ಹಾರಾಲು ಯತ್ನಿಸಿದ ಘಟನೆ ಸಂಭವಿಸಿದೆ‌.

ಪ್ರತಿನಿತ್ಯ ಗಲಾಟೆ, ಮಾನಸಿಕ ಹಿಂಸೆ ತಾಳಲಾರದೇ ಪುಟ್ಟ ಮಗುವಿನ ಜೊತೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಗುರುಪುರಕ್ಕೆ ಯುವಕನೊಬ್ಬ ಬಂದಿದ್ದಾನೆ. ಜನ ಸಂಚಾರ ಇಲ್ಲದ ಸಂದರ್ಭ ಪುಟ್ಟ ಮಗುವನ್ನು ಎತ್ತಿಕೊಂಡು ಸೇತುವೆಯ ಮೇಲೇರಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಆತನನ್ನು ಪ್ರಶ್ನಿಸುತ್ತಾ ಬೇರೆಡೆ ಗಮನ ಹೋಗುವಂತೆ ಮಾಡಿದ್ಜಾರೆ.

ಸ್ಥಳೀಯರ ಪ್ರಶ್ನೆಗಳಿಗೆ ಪುಟಾಣಿಯ ಹಿಡಿದುಕೊಂಡು ಸೇತುವೆ ಮೇಲಿದ್ದ ಯುವಕ ಉತ್ತರಿಸುತ್ತಲೇ ನದಿಗೆ ಹಾರಲು ಮುಂದಾಗಿದ್ದಾನೆ. ತಕ್ಷಣವೇ ಸ್ಥಳದಲ್ಲಿದ್ದ ಮುಸ್ಲಿಂ ಬಾಂಧವರು ಮಗು ಮತ್ತು ಆತನನ್ನು ಹಿಡಿದು ಎರಡು ಜೀವಗಳ ರಕ್ಷಿಸಿದ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

No Comments

Leave A Comment