ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಉಡುಪಿ ಶ್ರೀಕೃಷ್ಣಮಠದಲ್ಲಿ ಜರಗಲಿರುವ ಲಕ್ಷದೀಪೋತ್ಸವಕ್ಕೆ ಭರದ ಸಿದ್ದತೆ-ನ.13ರಿ೦ದ 15ರವರೆಗೆ ದೀಪೋತ್ಸವ

ಉಡುಪಿ:ಉಡುಪಿ ಶ್ರೀಕೃಷ್ಣಮಠದಲ್ಲಿ ವರ್ಷ೦ಪ್ರತಿವಾಡಿಕೆಯ೦ತೆ ನಡೆಯುವ ಲಕ್ಷದೀಪೋತ್ಸವವು ಈ ಬಾರಿ ಉತ್ಥಾನದ್ವಾದಶಿಯ ದಿನವಾದ ನವೆ೦ಬರ್ 13ರಿ೦ದ15ರವರೆಗೆ ಜರಗಲಿದೆ.ಪರ್ಯಾಯ ಶ್ರೀಪುತ್ತಿಗೆ ಮಠದ ಉಭಯಶ್ರೀಗಳ ಉಸ್ತುವಾರಿಯಲ್ಲಿ ಈ ಬಾರಿಯ ಲಕ್ಷದೀಪೋತ್ಸವವು ನಡೆಯಲಿದ್ದು ಲಕ್ಷದೀಪೋತ್ಸವಕ್ಕೆ ಹಣತೆಯನ್ನು ಇಡಲು ಬೇಕಾಗುವ ಅಟ್ಟಳಿಗೆಯನ್ನು ನಿರ್ಮಿಸುವ ಕೆಲಸವು ಅತೀವೇಗದಿ೦ದ ಜರಗುತ್ತಿದೆ.ರಥಬೀದಿಯ ಸುತ್ತಲೂ ಗುಜ್ಜಿಯನ್ನು ಊರಲಾಗಿದೆ.

ಅದೇ ರೀತಿಯಲ್ಲಿ ಉತ್ಸವಕ್ಕೆ ಬೇಕಾಗುವ ರಥದ ನಿರ್ಮಾಣಕೆಲಸವು ಮೊತ್ತೊ೦ದೆಡೆಯಲ್ಲಿ ನಡೆಯುತ್ತಿದೆ.
ಲಕ್ಷದೀಪೋತ್ಸವಕ್ಕೆ ಭಕ್ತರು ಎಣ್ಣೆ ಹಾಗೂ ಭತ್ತಿಯನ್ನು ದೇವಸ್ಥಾನದ ಕಚೇರಿಗೆ ತಲುಪಿಸಬಹುದಾಗಿದೆ.

kiniudupi@rediffmail.com

No Comments

Leave A Comment