ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಉಡುಪಿ ಮಾರುತಿ ವೀಥಿಕಾ ಶ್ರೀ ಗಣೇಶೋತ್ಸವ ಸಮಿತಿ ಭಕ್ತ ವೃಂದದ ಸಭೆ

ಉಡುಪಿ:ಶ್ರೀ ಗಣೇಶೋತ್ಸವ ಸಮಿತಿ ಭಕ್ತ ವೃಂದ, ಮಾರುತಿ ವೀಥಿಕಾ, ಉಡುಪಿ ಇದರ 24ನೇ ವರುಷದ ಗಣೇಶೋತ್ಸವ ಆಚರಿಸುವ ಕುರಿತು ಸಭೆಯನ್ನು ದಿನಾಂಕ. ಅಗಸ್ಟ್ 3 ರ ಶನಿವಾರ ಸಂಜೆ. 5:30 ಕ್ಕೆ. ನಗರದ ಮಾರುತಿವೀಥಿಕಾದಲ್ಲಿರುವ ಶ್ಯಾಮ್ ಕಾಂಪ್ಲೆಕ್ಸ್ ನ ಮೊದಲ ಮಾಳಿಗೆಯಲ್ಲಿ, (ಭವಾನಿ ಲಾಡ್ಜಿನ ಸಭಾಂಗಣದಲ್ಲಿ) ಸಮಿತಿಯ ಅಧ್ಯಕ್ಷರಾದ ಗುರುರಾಜ್ ಎಂ ಶೆಟ್ಟಿ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

ಈ ಬಾರಿಯ 24ನೇ ವರುಷದ ಗಣೇಶೋತ್ಸವ ಆಚರಿಸುವ ಕುರಿತು ಸಮಿತಿಯ ಪದಾಧಿಕಾರಿಗಳು ಸಲಹೆ ಸೂಚನೆ ನೀಡಿದರು
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ . ಅಧ್ಯಕ್ಷರಾದ ಗುರುರಾಜ್ ಎಂ ಶೆಟ್ಟಿ. ಪ್ರಧಾನ ಕಾರ್ಯದರ್ಶಿ ಗಣೇಶ್ ರಾಜ್ ಸರಳಬೆಟ್ಟು. ಕೋಶಾಧಿಕಾರಿ ಸುಧಾಕರ್ ಶೆಟ್ಟಿ. ಮೂಡನಿಡoಬೂರ್ . ಮೊಹಮ್ಮದ್ ಮೈತ್ರಿ ವಿಡಿಯೋ,ಸುಧೀರ್ ಶೇಟ್. ರಾಜೇಶ್ ಕಲ್ಮಾಡಿ, ರಾಜೇಶ್ ಶೆಟ್ಟಿ ಬನ್ನಂಜೆ ಮಹೇಶ್ ಉದ್ಯಾವರ. ಮೊಹಮ್ಮದ್ ಮೈತ್ರಿ. ಡೆನಿಸ್ ಡಿಸೋಜಾ. ಚಂದ್ರ ಗಾಣಿಗ. ಯು,ಪ್ರಸನ್ನ ರಾಜ್ ಮಠದಬೆಟ್ಟು. ಪತ್ರಕರ್ತ ಜಯಪ್ರಕಾಶ್ ಕಿಣಿ.. ಭಾಸ್ಕರ್ ಮೆಂಡನ್. ಕುಮಾರ್ ಶೆಟ್ಟಿ. ಸುರೇಶ್, ಪ್ರಮೋದ್ ಶೆಟ್ಟಿ , ಪೃಥ್ವಿರಾಜ್ , ಚಂದ್ರೇಶ್ ಸುವರ್ಣ, ಗೋಪಾಲಕೃಷ್ಣ. ದಂತ ವೈದ್ಯರಾದ ಎಸ್.ಎನ್ ಭಟ್, ಪ್ರಕಾಶ್. ಮತ್ತು ಭವಾನಿ ಲಾಡ್ಜಿನ ಸಿಬ್ಬಂದಿ ವರ್ಗದವರು ಸಹಕರಿಸಿದರು. ಹೊಸ ಸದಸ್ಯರನ್ನು ಆಯ್ಕೆ ಮಾಡಲಾಯಿತು. ರಾಜೇಶ್ ಕಲ್ಮಾಡಿ ಸ್ವಾಗತಿಸಿ,ಮಹೇಶ್ ಉದ್ಯಾವರ ಧನ್ಯವಾದ ನೀಡಿದರು.

kiniudupi@rediffmail.com

No Comments

Leave A Comment