ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ನಿಧಾನಗೊಳ್ಳುತ್ತಿದೆ ಭೂಮಿಯ ಒಳಪದರದ ತಿರುಗುವಿಕೆಯ ವೇಗ, ಇದರಿಂದ ಏನು ಪರಿಣಾಮ? ಅಧ್ಯಯನ ಹೇಳಿದ್ದೇನು?

ನಾವು ನೀವುಗಳು ತಿರುಗುತ್ತಿರುವ ಭೂಮಿಯ ಮೇಲೆ ವಾಸಿಸುತ್ತಿದ್ದೇವೆ. ಭೂಮಿಯು ತನ್ನ ಕಕ್ಷೆಯಲ್ಲಿ ತಿರುಗುತ್ತಾ, ಸೂರ್ಯನನ್ನು ಸುತ್ತುತ್ತಿರುತ್ತದೆ. ಈ ಪ್ರದಕ್ಷಿಣೆಯ ಕಾರಣದಿಂದಾಗಿ ಭೂಮಿಯ ಮೇಲೆ ಹಗಲು ಮತ್ತು ರಾತ್ರಿಯ ಸಂಭವಿಸುತ್ತದೆ. ಒಂದು ವೇಳೆ ಭೂಮಿಯು ತನ್ನ ತಿರುಗುವಿಕೆಯನ್ನು ನಿಧಾನಗೊಳಿಸಿದರೆ ಅಥವಾ ವೇಗಗತಿಯಲ್ಲಿ ತಿರುಗಿದರೆ ಏನಾಗಬಹುದು ಎಂದು ಯಾರು ಕೂಡ ಊಹಿಸಿರಲು ಸಾಧ್ಯವಿಲ್ಲ. ಆದರೆ ಇದೀಗ ಭೂಮಿಯ ಒಳಪದರದ ತಿರುಗುವಿಕೆಯ ವೇಗವು ನಿಧಾನವಾಗಿದೆ ಎನ್ನುವ ವಿಚಾರವನ್ನು ವಿಜ್ಞಾನಿಗಳು ಬಹಿರಂಗ ಪಡಿಸಿದ್ದಾರೆ.

ನೇಚರ್‌’ನಲ್ಲಿ ಪ್ರಕಟವಾದ ಅಧ್ಯಯನವು 2010ರ ಸುಮಾರಿಗೆ ಭೂಮಿ ಒಳಗಿರುವ ಒಳಪದರವು ತನ್ನ ವೇಗವನ್ನು ಕಡಿಮೆ ಮಾಡಲು ಪ್ರಾರಂಭಿಸಿತು ಎನ್ನುವುದಕ್ಕೆ ಸಾಕ್ಷಿಗಳನ್ನು ಒದಗಿಸುತ್ತದೆ. ಈ ಭೂಮಿಯ ಒಳ ಪದರವು ಭೂಮಿ ಮೇಲಿನ ಪದರಕ್ಕಿಂತ ಅತ್ಯಂತ ಕಡಿಮೆ ವ್ಯಾಸ ಹೊಂದಿದ್ದು, ಕಳೆದ ಸುಮಾರು 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭೂಮಿಯ ಹೊರಪದರಕ್ಕಿಂತ ನಿಧಾನವಾಗಿ ಹಾಗೂ ಹಿಮ್ಮುಖವಾದ ದಿಕ್ಕಿನಲ್ಲಿ ಚಲಿಸುತ್ತಿದೆ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ.

ಭೂಮಿಯ ಒಳಪದರ ತಿರುಗುವಿಕೆಯ ಅಧ್ಯಯನಕ್ಕಾಗಿ ಜಾನ್ ವಿಡೇಲ್ ಮತ್ತು ಅವರ ಸಹೋದ್ಯೋಗಿಗಳ ತಂಡವು ದಕ್ಷಿಣ ಅಟ್ಲಾಂಟಿಕ್‌ನ ದಕ್ಷಿಣ ಸ್ಯಾಂಡ್‌ವಿಚ್ ದ್ವೀಪಗಳ ಸುತ್ತಲೂ 1991 ಮತ್ತು 2023 ರ ನಡುವೆ ದಾಖಲಾದ 121 ಪುನರಾವರ್ತಿತ ಭೂಕಂಪಗಳ ಸಮಯ ಹಾಗೂ ಭೂಕಂಪನದ ತೀವ್ರತೆಯನ್ನು ವಿಶ್ಲೇಷಣೆ ಮಾಡಿದ್ದಾರೆ. ಅದಲ್ಲದೇ, 2023 ರ ವರದಿಗಳ ಪ್ರಕಾರ ಭೂಮಿಗಿಂತ ವೇಗವಾಗಿ ತಿರುಗುತ್ತಿದ್ದ ಒಳಪದರವು ಇದೀಗ ನಿಧಾನವಾಗಿ ತಿರುಗುತ್ತಿದೆ ಎಂದು ಬಹಿರಂಗ ಪಡಿಸಿದ್ದಾರೆ.

ಒಳಪದರದ ತಿರುಗುವಿಕೆ ನಿಧಾನವಾಗಲು ಕಾರಣಗಳೇನು?

ಭೂಮಿಯು ನಾಲ್ಕು ಪದರಗಳನ್ನು ಒಳಗೊಂಡಿದ್ದು, ಹೊರಗಿನ ಪದರಗಳು ಮೃದುವಾಗಿದ್ದರೂ, ಒಳ ಪದರವು ಗಟ್ಟಿಯಾದ ತಿರುಳಿನಿಂದ ರೂಪಿತವಾಗಿರುತ್ತದೆ. ವಿಜ್ಞಾನಿಗಳು ಒಳಗಿನ ತಿರುಳಿನ ಕುಸಿತವು ಭೂಮಿಯ ಕಾಂತೀಯ ಕ್ಷೇತ್ರವನ್ನು ಉತ್ಪಾದಿಸುವ ದ್ರವದ ಹೊರಭಾಗದ ಕೋರ್‌ನ ಮಂಥನದಿಂದ ಉಂಟಾಗುತ್ತದೆ. ಅದಲ್ಲದೇ ಭೂಮಿಯ ಮೇಲಿನ ಕಲ್ಲಿನ ಪದರವು ದಟ್ಟವಾದ ಪ್ರದೇಶಗಳಿಂದ ಗುರುತ್ವಾಕರ್ಷಣೆಯ ಎಳೆತಗಳು ಉಂಟಾಗುತ್ತದೆ. ಇದೇ ಭೂಮಿಯ ಒಳಪದರದ ತಿರುಗುವಿಕೆಯು ನಿಧಾನವಾಗಲು ಕಾರಣವಾಗಿದೆ. ಈ ತಿರುಗುವಿಕೆಯು ಕಡಿಮೆಯಾಗುತ್ತಾ ಹೋದಲ್ಲಿ ಭೂಮಿಯ ತಿರುಗುವಿಕೆಯ ವೇಗವು ನಿಧಾನವಾಗಲಿದೆ. ಈ ಗ್ರಹದ ಮೇಲೆ ವಾಸಿಸುತ್ತಿರುವ ಜೀವರಾಶಿಗಳ ಮೇಲೆ ನಾನಾ ರೀತಿಯ ಪರಿಣಾಮಗಳು ಬೀರಲಿದೆ ಎಂದು ತಿಳಿಸಿದ್ದಾರೆ.

kiniudupi@rediffmail.com

No Comments

Leave A Comment