ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಪರ್ಕಳದ ದುರ್ಗಾ ನಗರದಲ್ಲಿ ಉದ್ಘಾಟನೆಯ ಮುನ್ನ ಕುಸಿದ ಕೆರೆ

ಉಡುಪಿ:ನಗರಸಭೆ ಮತ್ತು ಉಡುಪಿ ಅಭಿವೃದ್ಧಿಯ ಪ್ರಾಧಿಕಾರದಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆಯ ಹಣ ಕೆರೆ ಅಭಿವೃದ್ಧಿಗೆಂದೆ ಮೀಸಲಾಗಿರುವ ಅನುದಾನದಲ್ಲಿ ಸುಮಾರು ಅಂದಾಜು60 ಲಕ್ಷ ವೆಚ್ಚದಲ್ಲಿ ಪರ್ಕಳದ ದುರ್ಗಾ ನಗರದಲ್ಲಿ ನೂತನವಾಗಿ ರಚಿಸಲಾದ ಕೆರೆ ಉದ್ಘಾಟನೆ ಮುನ್ನಕುಸಿದಿದೆ.

ಈ ಕೆರೆ ಮಣ್ಣುಅಗೆಯುವಾಗ ತ್ರಿಶೂಲ ಇರುವ ಕಲ್ಲು ಹಾಗೂ ಅಭಿಶೇಕ ನಡೆದ ತೀರ್ಥ ಹರಿದು ಹೋಗುವ ಕಲ್ಲಿನ ಕೊಂಡಿಸಿಕ್ಕಿದ್ದು . ನಾಥ ಪಂಥಕ್ಕೆ ಸೇರಿದ ವಸ್ತುಗಳಾಗಿದೆ.ಈ ವಸ್ತುಗಳು 12ನೇ ಶತಮಾನಕ್ಕೆ ಸೇರಿರುತ್ತದೆ ಎಂದು ತಿಳಿದುಬಂದಿದೆ.
ಇದೀಗ ಒಂದು ತಿಂಗಳ ಹಿಂದೆ ಈಕೆರೆ ಪೂರ್ಣಗೊಂಡಿದೆ.

ಉದ್ಘಾಟನೆಯ ಯಾಗುವ ಮೊದಲೇ ಕೆರೆ ಕುಸುಯು ತ್ತಿರುವುದು ಕಾಮಗಾರಿಯ ಗುಣ ಪರೀಕ್ಷಿಸಬೇಕಾಗಿದೆ.. ಪರ್ಕಳದ ಸುತ್ತಮುತ್ತ ಬೇರೆ ಬೇರೆ ಇಲಾಖೆಯ ಅನುದಾನದಿಂದ ಕೆರೆ ಅಭಿವೃದ್ಧಿ ಆಗುತ್ತಿರುವುದು. ಮತ್ತೆ ಮತ್ತೆ ಕುಸಿಯುತ್ತಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡುತ್ತಿದೆ. ಅನುದಾನ ತರುವ ಆಯ್ಕೆಯಾದ ಜನಪ್ರತಿನಿಧಿಗಳು. ಹಾಗೂ
ಇಲಾಖಾ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಬೇಕಾಗಿದೆ.

kiniudupi@rediffmail.com

No Comments

Leave A Comment