
ರೇಣುಕಾಸ್ವಾಮಿ ಕೊಲೆ ಪ್ರಕರಣ: ಚಿತ್ರದುರ್ಗದಲ್ಲಿ ಆರೋಪಿ ರಾಘು ಜೊತೆ ಪೊಲೀಸರಿಂದ ಸ್ಥಳ ಮಹಜರು
ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿರುವ ಸ್ಥಳವನ್ನು ಮಹಜರು ನಡೆಸಲು ಸಿಪಿಐ ಸಂಜೀವ್ ಗೌಡ ನೇತೃದ ತಂಡ ಆರೋಪಿ ರಾಘುನನ್ನು ಗುರುವಾರ ತಡರಾತ್ರಿ ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಬಳಿ ಹಾಗೂ ಬೆಂಗಳೂರು ರಸ್ತೆಯ ಪಕ್ಕದಲ್ಲಿನ ಜಗಳೂರು ಮಹಲಿಂಗಪ್ಪ ಪೆಟ್ರೋಲ್ ಬಂಕ್ ಬಳಿ ಸ್ಪಾಟ್ ಮಹಜರ್ ನಡೆಸಿದರು.
ತನಿಖೆ ವೇಳೆ ಆರೋಪಿ ರಾಘು ರೇಣುಕಾಸ್ವಾಮಿಯನ್ನು ಸಂಚು ರೂಪಿಸಿ ಕಿಡ್ನಾಪ್ ಮಾಡಿರುವ ಮಾಹಿತಿ ನೀಡಿದ್ದ ಅದರಂತೆ ಆರೋಪಿ ರಘು ನನ್ನು ಗುರುವಾರ ತಡರಾತ್ರಿ ಸ್ಥಳ ಮಹಜರು ನಡೆಸಲಾಯಿತು.