ಉಡುಪಿ ನಗರದ ಕೆ.ಎ೦.ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಮ೦ದಿರ-ಮಠದಲ್ಲಿ ಜುಲಾಯಿ 10ರ ಗುರುವಾರದ೦ದು ಶ್ರೀಗುರು ಪೂರ್ಣಿಮಾ ಮಹೋತ್ಸವವು ಜರಗಲಿದೆ...
ಮಣಿಪುರ ಮತ್ತೆ ಪ್ರಕ್ಷುಬ್ಧ: ಉಗ್ರರಿಂದ ವ್ಯಕ್ತಿಯ ಹತ್ಯೆ!
ಇಂಫಾಲ: ಜನಾಂಗೀಯ ಕಲಹ ಎದುರಿಸಿದ್ದ ಮಣಿಪುರ ಮತ್ತೆ ಆತಂಕದ ಪರಿಸ್ಥಿತಿ ಎದುರಿಸಿದೆ. ಜಿರಿಬಮ್ ಜಿಲ್ಲೆಯಲ್ಲಿ 59 ವರ್ಷದ ನಿರ್ದಿಷ್ಟ ಸಮುದಾಯವೊಂದರ ವ್ಯಕ್ತಿಯನ್ನ ಮತ್ತೊಂದು ಸಮುದಾಯದ ಉಗ್ರರು ಹತ್ಯೆ ಮಾಡಿದ್ದಾರೆ.
ಸೋಯಬಮ್ ಶರತ್ಕುಮಾರ್ ಸಿಂಗ್ ಎಂದು ಗುರುತಿಸಲಾದ ವ್ಯಕ್ತಿ ಬೆಳಿಗ್ಗೆ ತನ್ನ ಜಮೀನಿಗೆ ಹೋದ ನಂತರ ನಾಪತ್ತೆಯಾಗಿದ್ದ. ಆ ಬಳಿಕ ಆತನ ಮೃತದೇಹ ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಘಟನೆಯ ನಂತರ, ಆಕ್ರೋಶಗೊಂಡ ಸ್ಥಳೀಯರು ಪ್ರತೀಕಾರವಾಗಿ ಪಾಳುಬಿದ್ದ ಕಟ್ಟಡವೊಂದಕ್ಕೆ ಬೆಂಕಿ ಹಚ್ಚಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರು ಚುನಾವಣಾ ಹಿನ್ನೆಲೆಯಲ್ಲಿ ತಮ್ಮಿಂದ ವಶಪಡಿಸಿಕೊಂಡ ಪರವಾನಗಿ ಪಡೆದ ಬಂದೂಕುಗಳನ್ನು ಚುನಾವಣೆ ಮುಗಿದ ನಂತರ ತಮಗೆ ಹಿಂತಿರುಗಿಸಬೇಕೆಂದು ಒತ್ತಾಯಿಸಿ ಜಿರಿಬಾಮ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಮೈತಿಗಳು, ಮುಸ್ಲಿಮರು, ನಾಗಾಗಳು, ಕುಕಿಗಳು ಮತ್ತು ಮಣಿಪುರಿಯೇತರರನ್ನು ಒಳಗೊಂಡ ವೈವಿಧ್ಯಮಯ ಜನಾಂಗೀಯ ಸಂಯೋಜನೆಯನ್ನು ಹೊಂದಿರುವ ಜಿರಿಬಾಮ್, ಕಳೆದ ವರ್ಷ ಮೇ ತಿಂಗಳಿನಿಂದ ಮಣಿಪುರದಲ್ಲಿ ಉಲ್ಬಣಗೊಂಡ ಜನಾಂಗೀಯ ಕಲಹದಿಂದ ಇದುವರೆಗೆ ಪ್ರಭಾವಿತವಾಗಿಲ್ಲ.
ಇಂಫಾಲ್ ಕಣಿವೆ ಮೂಲದ ಮೈಟೈಸ್ ಮತ್ತು ಬೆಟ್ಟಗಳ ಮೂಲದ ಕುಕಿಗಳ ನಡುವಿನ ಜನಾಂಗೀಯ ಸಂಘರ್ಷವು 200 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ ಮತ್ತು ಸಾವಿರಾರು ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ.