ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಉದ್ಯಾವರ ಶ್ರೀ ವೀರವಿಠ್ಠಲ ದೇವಳದ ಮೂಕ್ತೇಸರರಾಗಿದ್ದ ನಾಗೇಶ್ ಕಾಮತ್ ನಿಧನ

ಉಡುಪಿ: ಉದ್ಯಾವರ ಶ್ರೀ ವೀರವಿಠ್ಠಲ ದೇವಳದ ಮೂಕ್ತೇಸರರಾಗಿದ್ದ ನಾಗೇಶ್ ಕಾಮತ್ ಇವರು ಭಾನುವಾರ ಇಂದು ಮುಂಜಾನೆ ತೀವ್ರ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅತೀ ಸಣ್ಣ ವಯಸ್ಸಿನಲ್ಲಿ ನಿಧಾನ ಹೊ೦ದಿದ್ದಾರೆ.

ಇವರ ನಿಧನವು ಅವರ ಕುಟುಂಬಕ್ಕೆ, ನಮ್ಮ ಸಮಾಜಕ್ಕೆ, ನಮ್ಮ ದೇವಳಕ್ಕೆ ತುಂಬಲಾಗದ ನಷ್ಟ. ಅವರು ಶ್ರೀ ವೀರವಿಠ್ಠಲ ದೇವಳದ ಮುಕ್ತೇಸರರಾಗಿ ಸರಿ ಸುಮಾರು 15 ವರ್ಷ ಸೇವೆಯನ್ನು ಸಲ್ಲಿಸಿದ್ದರು . ಅವರ ಈ ಸಮಯದಲ್ಲಿ ದೇವಳದಲ್ಲಿ ಹಿಂದೆಂದೂ ನಡೆಯದ, ಮುಂದೆಯೂ ನಡೆಯಲಸಾಧ್ಯವಾದ development ಕೆಲಸಗಳು ನಡೆದದನ್ನು ನಾವು ಸ್ಮರಿಸಬಹುದಾಗಿದೆ.

ಅವರ ಪಾರ್ಥಿವ ಶರೀರವನ್ನು ನಾಳೆ ಅಂತ್ಯಕ್ರಿಯೆಗಾಗಿ ಉದ್ಯಾವರಕ್ಕೆ ತರಲಾಗುವುದು.

No Comments

Leave A Comment