ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಹಿರಿಯ ಟೂರಿಸ್ಟ್ ಬಸ್ ಏಜೆಂಟ್ ಸ್ಟ್ಯಾನ್ಲಿ ಸುಧಾಕರ್ ಸಾಲಿನ್ಸ್ ನಿಧನ

ಉಡುಪಿ: ಟೂರಿಸ್ಟ್ ಬಸ್ ಏಜೆಂಟಾಗಿ ಕಾರ್ಯ ನಿರ್ವಹಿಸುತ್ತಿದ್ದ  ಹಿರಿಯ ಬಸ್ ಏಜೆಂಟ್ ಸ್ನೇಹ ಜೀವಿ ಸ್ಟ್ಯಾನ್ಲಿ   ಸುಧಾಕರ್ ಸಾಲಿನ್ಸ್ (53)  ನಿಧನರಾಗಿದ್ದಾರೆ.

ಕಳೆದ  ಐದು ದಿನಗಳ ಹಿಂದೆ  ಧೀಢೀರಾಗಿ ಮೆದುಳಿನ ರಕ್ತಸ್ರಾವಕ್ಕೆ ತುತ್ತಾಗಿ ಮಣಿಪಾಲ ಅಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿತ್ತು. ಬಳಿಕ ಅಜ್ಜರಕಾಡು ಅಸ್ಪತ್ರೆಯಲ್ಲಿ  ಜೀವಣ್ಮರಣ ಹೋರಾಟದಲ್ಲಿ ದ್ದ ಸುಧಾಕರ್ ಚಿಕಿತ್ಸೆಗೆ ಸ್ಪಂದಿಸದೇ ರವಿವಾರ ಮುಂಜಾನೆ ದೈವಧೀನರಾದರು.

ಕಳೆದ 35 ವರ್ಷಗಳಿಂದ ಉಡುಪಿಯಲ್ಲಿ ಟೂರಿಸ್ಟ್ ಏಜೆಂಟಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಎಲ್ಲರಿಗೂ ಚಿರಪರಿಚಿತರಾಗಿದ್ದರು.ಎಲ್ಲರೊಂದಿಗೂ  ನಗುತ್ತಾ ಬೆರೆತು ಬಾಳುವ ಸ್ವಭಾವ ಹೊಂದಿದ್ದ  ಅವರು ಸ್ನೇಹ ಜೀವಿಯಾಗಿದ್ದರು.ಪತ್ನಿ ಹಾಗೂ ಒಂದು ಗಂಡು ಮಗ ಹಾಗೂ ಹೆಣ್ಣು ಮಗಳು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆ ಸೋಮವಾರದಂದು ಉಚ್ಚಿಲದ  ಸುಭಾಸ್ ರೋಡ್ ನಲ್ಲಿರುವ ಸ್ವಗೃಹದಲ್ಲಿ ವಿಧಿವಿಧಾನಗಳು ನಡೆಯಲಿದೆ.

kiniudupi@rediffmail.com

No Comments

Leave A Comment