ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಯುವ ಗೇಮರ್ ಗಳ ಭೇಟಿ, ಗೇಮಿಂಗ್ ಉದ್ಯಮ ಬಗ್ಗೆ ಸಂವಾದ- ಕೆಲವು ಆಟಗಳಲ್ಲಿ ಕೈಯಾಡಿಸಿದ ಪ್ರಧಾನಿ ಮೋದಿ
ನವದೆಹಲಿ: ಲೋಕಸಭೆ ಚುನಾವಣೆ 2024ರ ಬಿರುಸಿನ ಪ್ರಚಾರ, ಬಿಡುವಿರದ ಸಮಯ ಮಧ್ಯೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೇಮಿಂಗ್ ಉದ್ಯಮಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳ ಕುರಿತು ಭಾರತದ ಪ್ರಮುಖ ಗೇಮರ್ ಗಳ ಜೊತೆ ಸಂವಾದ ನಡೆಸಿದರು.
ಇ-ಗೇಮಿಂಗ್ ಉದ್ಯಮದ ಮುಂದಿರುವ ಸವಾಲುಗಳು ಮತ್ತು ಭವಿಷ್ಯದ ಬಗ್ಗೆ ನಡೆದ ಮುಕ್ತ ಸಂವಾದದಲ್ಲಿ, ಪ್ರಧಾನ ಮಂತ್ರಿಯವರು ಕೆಲವು ಗೇಮ್ ಗಳನ್ನು ಪ್ರಯತ್ನಿಸಿ ನೋಡಿದರು. ತಮ್ಮ ಕುತೂಹಲಕಾರಿ ಪ್ರಶ್ನೆಗಳನ್ನು ಗೇಮರ್ ಗಳ ಮುಂದಿಟ್ಟರು.
ಜನರು ವಿಭಿನ್ನ ಪರಿಹಾರಗಳನ್ನು ನೀಡಿದ್ದಾರೆ. ನಾನು ಮಿಷನ್ ಲೈಫ್ ಎಂಬ ಪರ್ಯಾಯ ಪರಿಹಾರವನ್ನು ಹೊಂದಿದ್ದೇನೆ, ಇದು ಪರಿಸರಕ್ಕೆ ಅನುಕೂಲವಾಗುವಂತೆ ನಮ್ಮ ದೈನಂದಿನ ಜೀವನಶೈಲಿಯನ್ನು ಬದಲಾಯಿಸಲು ಪ್ರತಿಪಾದಿಸುತ್ತದೆ. ಈಗ, ಜಾಗತಿಕ ಹವಾಮಾನ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ಗೇಮ್ ನ್ನು ಕಲ್ಪಿಸಿಕೊಳ್ಳಿ, ಅಲ್ಲಿ ಗೇಮರ್ ವಿವಿಧ ವಿಧಾನಗಳು ಮತ್ತು ಪರಿಹಾರಗಳನ್ನು ಅನ್ವೇಷಿಸಬೇಕು ಅತ್ಯಂತ ಸಮರ್ಥನೀಯ ವಿಧಾನವನ್ನು ಗುರುತಿಸಿ ಎಂದು ಮೋದಿ ಸಂವಾದದ ಸಮಯದಲ್ಲಿ ಗೇಮರ್ ಗಳಿಗೆ ಸೂಚಿಸಿದರು.
ಈ ಗೇಮಿಂಗ್ ನ ಹಂತಗಳು ಯಾವುವು? ನಾವು ಅದರ ಮೂಲಕ ಪ್ರಯಾಣ ಮಾಡುವುದು ಮತ್ತು ಯಶಸ್ಸಿಗೆ ಉತ್ತಮ ಮಾರ್ಗವನ್ನು ಹೇಗೆ ಆರಿಸಿಕೊಳ್ಳುವುದು? ಉದಾಹರಗಣೆಗೆ ಸ್ವಚ್ಛತಾ ವಿಷಯವನ್ನು ತೆಗೆದುಕೊಳ್ಳಿ. ಗೇಮ್ ನ ವಿಷಯ ಸ್ವಚ್ಛತೆಯ ಸುತ್ತ ಇರುತ್ತದೆ. ಪ್ರತಿ ಮಗು ಈ ಆಟವನ್ನು ಆಡಬೇಕು. ಯುವಕರು ಭಾರತೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಭಾರತೀಯತೆಯ ನಿಜವಾದ ಅರ್ಥವನ್ನು ಅರ್ಥಮಾಡಿಕೊಳ್ಳಬೇಕು. ಭಾರತದ ಮಹತ್ವ ಸಾರುವಂತಾಗಬೇಕು ಎಂದರು.
ಗೇಮಿಂಗ್ ಉದ್ಯಮದಲ್ಲಿನ ಹೊಸ ಬೆಳವಣಿಗೆಗಳ ಕುರಿತು ಗೇಮರುಗಳು ಪ್ರಧಾನ ಮಂತ್ರಿಯೊಂದಿಗೆ ಚರ್ಚಿಸಿದರು, ಅವರು ಭಾರತದಲ್ಲಿ ಗೇಮಿಂಗ್ ಉದ್ಯಮವನ್ನು ಉತ್ತೇಜಿಸುವ ಮೂಲಕ ಸರ್ಕಾರವು ಗೇಮರ್ ಗಳ ಸೃಜನಶೀಲತೆಯನ್ನು ಹೇಗೆ ಗುರುತಿಸಿದೆ ಎಂಬುದನ್ನು ಒತ್ತಿ ಹೇಳಿದರು.
ಗೇಮಿಂಗ್ ಉದ್ಯಮದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಚರ್ಚಿಸುವಾಗ ಗೇಮಿಂಗ್ ಜೂಜಾಟದ ಸಮಸ್ಯೆ ಬಗ್ಗೆ ಕೂಡ ಚರ್ಚಿಸಿದರು.