ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಇ೦ದು ಮಾ.24.ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ರಜತ ಕಲಶ ಮತ್ತು ಶಿಲಾನ್ಯಾಸದ ಶಿಲೆಗಳ ಭವ್ಯ ಮೆರವಣಿಗೆ

ಉಡುಪಿ:ಶ್ರೀ ವೆಂಕಟರಮಣ ದೇವಸ್ಥಾನ ಕಲ್ಯಾಣಪುರ ಇದರ ನಿಧಿ ಕಲಶ ಪೂರ್ವಕ ಶಿಲಾನ್ಯಾಸ ಕಾರ್ಯಕ್ರಮದ ಪೂರ್ವಭಾವಿಯಾಗಿ ತಾ.24-03-2024 ನೇ ಆದಿತ್ಯವಾರ ಇ೦ದು ವಿಶೇಷ ಸಾಂಪ್ರದಾಯಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸಂಜೆ 5.00 ಕ್ಕೆ ಶ್ರೀ ವೀರಭದ್ರ ದೇವಸ್ಥಾನ ಸಂತೆಕಟ್ಟೆಯಿಂದ ರಜತ ಕಲಶಗಳನ್ನು ಮತ್ತು ಶಿಲಾನ್ಯಾಸದ ಶಿಲೆಗಳನ್ನು ಭವ್ಯವಾದ ಮೆರವಣಿಗೆಯಲ್ಲಿ ಶ್ರೀ ದೇವಳಕ್ಕೆ ತರುವುದರೊ೦ದಿಗೆ ಸಂಜೆ 6.00ರಿ೦ದ 7.00 ಕ್ಕೆ : ನೂತನ ಗರ್ಭಗುಡಿಯ ಪಂಚಾಂಗದ ಸುತ್ತಲೂ ಸಾಲು ಹಣತೆ ದ್ವೀಪ ಪ್ರಜ್ವಲನೆ ಹಾಗೂ ಭಜನ ಕಾರ್ಯಕ್ರಮವು ಜರಗಲಿದೆ.

7.00ಕ್ಕೆ: ಶ್ರೀ ದೇವರ ರಾತ್ರಿ ಪೂಜೆ ಮತ್ತು ಪ್ರಸಾದ ವಿತರಣೆಯ ಬಳಿಕ 7.30 ಕ್ಕೆ : ಭೋಜನ ಪ್ರಸಾದ ಕಾರ್ಯಕ್ರಮ ಜರಗಲಿದೆ.

ಮಾರ್ಚ್ 25ರ ಸೋಮವಾರದ೦ದು ಬೆಳಿಗ್ಗೆ 7.೧೦ಕ್ಕೆ ಸಕಲ ಧಾರ್ಮಿಕ ವಿಧಿ-ವಿಧಾನದೊ೦ದಿಗೆ ಶ್ರೀಸ೦ಸ್ಥಾನ ಶ್ರೀಕಾಶೀಮಠದ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನಿಧಿ ಕಲಶ ಸ್ಥಾಪನಾ ಪೂರ್ವಕ ಶಿಲಾನ್ಯಾಸ ಕಾರ್ಯಕ್ರಮವು ಜರಗಲಿದೆ.

kiniudupi@rediffmail.com

No Comments

Leave A Comment