ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ;ಡಿ.17ರ೦ದು 95ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವಕ್ಕೆ ಚಾಲನೆ…

ಉಡುಪಿ:ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 95ನೇ ವರ್ಷದ ಅಖಂಡ ಭಜನಾ ಸಪ್ತಾಹ ಮಹೋತ್ಸವವು ಸ್ವಸ್ತಿ ಶ್ರೀ ಶೋಭಕೃತ್ ನಾಮ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿ ದಿನಾಂಕ 17-12-2023 ನೇ ಆದಿತ್ಯವಾರ ಪ್ರಾತಃಕಾಲ 8:00 ಘಂಟೆಗೆ ಆರಂಭಗೊಂಡು ಮಾರ್ಗಶಿರ ಶುದ್ಧ ದ್ವಾದಶಿ 24-12-2023 ನೇ ಆದಿತ್ಯವಾರ ಪ್ರಾತಃಕಾಲ 8:00 ಘಂಟೆಯ ತನಕ ಅಹೋರಾತ್ರಿ 7 ದಿನಗಳ ಪರ್ಯಂತ ಜರಗಲಿರುವುದು.

ದಿನಾಂಕ 17-12-2023 ರಂದು ಬೆಳಗ್ಗೆ 8:00 ಘಂಟೆಗೆ ದೀಪ ಪ್ರಜ್ವಲನ ನಡೆಯಲಿದೆ ತದನಂತರ ವಿವಿಧ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮಗಳ ವಿವರ :
1) ಭಜನಾ ಸಪ್ತಾಹ ದೀಪ ಪ್ರಜ್ವಲನೆ – ಪ್ರಥಮ ದಿನ
2) ಆಹ್ವಾನಿತ ಭಜನಾ ಕಲಾವಿದರಿ೦ದ ಭಕ್ತಿ ಸಂಗೀತ ಕಾರ್ಯಕ್ರಮ – ಪ್ರತಿನಿತ್ಯ ಸಾಯಂಕಾಲ 6:00 ಕ್ಕೆ
3) ವಸಂತ ಪೂಜೆ – ಪ್ರತಿನಿತ್ಯ ರಾತ್ರಿ 10:30 ಕ್ಕೆ
4) ಕಾಕಡ ಆರತಿ – ಪ್ರತಿನಿತ್ಯ ಪ್ರಾತಕಾಲ 4.30 ಕ್ಕೆ
5) ವಿವಿಧ ಸಂತ ಮಂಡಳಿಯವರ ಭಜನೆ
6) ಏಕಾದಶೀ ನಗರ ಭಜನೆ
7) ಮುಕೋಟಿ ದ್ವಾದಶಿ -ಸ್ವವರ್ಣನದಿ ಸ್ನಾನ, ಸಪ್ತಾಹ ಮಂಗಳ, ಉರುಳುಸೇವೆ, ಏಲಂ ಕಾರ್ಯಕ್ರಮ

ಈ ಎಲ್ಲಾ ಪುಣ್ಯಪ್ರದ ಕಾರ್ಯಕ್ರಮದಲ್ಲಿ ಸಮಸ್ತ ಸಮಾಜ ಬಾಂಧವರು ಹಾಗೂ ಭಜಕ ವೃಂದದವರು ಭಾಗವಹಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಸಪ್ತಾಹ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.

 

kiniudupi@rediffmail.com

No Comments

Leave A Comment