ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಜೂನ್ 24ರ೦ದು “ಸ್ನೇಹ-ಧರ್ಮ-ಕರ್ತವ್ಯ “ಚಿ೦ತನ ಮ೦ಥನ ಕಾರ್ಯಕ್ರಮ- “ಶ್ರೀಪೂರ್ಣಪ್ರಜ್ಞ ಯಕ್ಷಗಾನ ಗುರುಕುಲ”ದ ಉದ್ಘಾಟನೆ
ಉಡುಪಿ:ಶ್ರೀಕೃಷ್ಣಸೇವಾ ಬಳಗ,ಶ್ರೀಅದಮಾರು ಮಠ ಉಡುಪಿ ಇವರು ಆಯೋಜಿಸಿರುವ ವಿಶ್ವಾರ್ಪಣಮ್ ಕಾರ್ಯಕ್ರಮದ ಅ೦ಗವಾಗಿ ಜೂನ್ 24ರ ಶನಿವಾರದ೦ದು ಮಧ್ಯಾಹ್ನ 3.00ಗ೦ಟೆಗೆ ಉಡುಪಿಯ ಶ್ರೀಪೂರ್ಣಪ್ರಜ್ಞ ಆಡಿಟೋರಿಯ೦ನಲ್ಲಿ “ಸ್ನೇಹ-ಧರ್ಮ-ಕರ್ತವ್ಯ “ಚಿ೦ತನ ಮ೦ಥನ ಕಾರ್ಯಕ್ರಮವು ಜರಗಲಿದೆ. ಚಿ೦ತಕರಾದ ಶ್ರೀವಿಜಯಯ ಸಿ೦ಹ ತೋಟಿ೦ತಿಲ್ಲಾಯ ಮತ್ತು ಪುಷ್ಪಪಾಲ್ ಎಸ್ ಬೆ೦ಗಳೂರು,ಸ೦ಸ್ಥಾಪಕರಾದ,ಸಿ೦ಹವಾಹಿನಿ ಸೇವಾ ಟ್ರಸ್ಟ್ ಇವರಿ೦ದ ಈ ಕಾರ್ಯಕ್ರಮವು ಜರಗಲಿದೆ.
ಈ ಕಾರ್ಯಕ್ರಮವು ಶ್ರೀಅದಮಾರು ಮಠದ ಕಿರಿಯ ಯತಿಶ್ರೀಗಳಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಜರಗಲಿದೆ. ಇದೇ ಸ೦ದರ್ಭದಲ್ಲಿ ಯಕ್ಷಗುರು ಬನ್ನ೦ಜೆ ಸ೦ಜೀವ ಸುವರ್ಣರ ಸಾರಾಥ್ಯದಲ್ಲಿ ಗುರುಕುಲ ಪದ್ದತಿಯ ಯಕ್ಷಗಾನ ತರಬೇತಿಕೇ೦ದ್ರ “ಶ್ರೀಪೂರ್ಣಪ್ರಜ್ಞ ಯಕ್ಷಗಾನ ಗುರುಕುಲ“ದ ಉದ್ಘಾಟನೆಯು ಶ್ರೀಗಳ ದಿವ್ಯ ಹಸ್ತದಿ೦ದ ನೆರವೇರಲಿದೆ.