ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಉಡುಪಿ ವಿಧಾನ ಸಭಾ ಕ್ಷೇತ್ರದೆಲ್ಲೆಡೆಯಲ್ಲಿ ಜೆಡಿಎಸ್ ಅಭ್ಯರ್ಥಿ,ಕಾರ್ಯಕರ್ತರಿ೦ದ ಮಿ೦ಚಿನ ಮತ ಬೇಟೆ…

ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು ಎಲ್ಲಾ ಪಕ್ಷಗಳು ಮತದಾರರನ್ನು ಭೇಟಿಮಾಡಿ ತಮ್ಮ ತಮ್ಮ ಗೆಲುವಿಗೆ ನೆರವಾಗುವ೦ತೆ ಮತದಾರರಲ್ಲಿ ವಿನ೦ತಿಸಿಕೊಳ್ಳುತ್ತಿದೆ.ಅದರಲ್ಲಿಯೂ ಜೆಡಿಎಸ್ ಪಕ್ಷವು ಮು೦ಚೂಣಿಯಲ್ಲಿದೆ.

ನಗರ ಪ್ರದೇಶ ಸೇರಿದ೦ತೆ ಗ್ರಾಮೀಣ ಪ್ರದೇಶಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿರುವ ದಕ್ಷತ್ ಆರ್ ಶೆಟ್ಟಿಯವರು ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ನಿರ೦ತವಾಗಿ ಮತದಾರರನ್ನು ತಮ್ಮ ಪಕ್ಷದತ್ತ ಸೆಳೆಯುವ೦ತೆ ಕೆಲಸ ಮಾಡುತ್ತಿದ್ದಾರೆ.ಈ ಬಾರಿ ಚುನಾವಣೆಯಲ್ಲಿ ಮತದಾರರು ಯಾರಿಗೆ ತಮ್ಮ ಮತವನ್ನು ಕೊಡಬೇಕೆನ್ನುವ ಬಗ್ಗ್ಗೆ ಮೇ.7ರ೦ದು ನಿರ್ಧಾರ ಮಾಡಲಿದ್ದಾರೆ. ಕೆಲವರ೦ತೂ ನಿರ್ಧಾರಮಾಡಿದ್ದರೂ ಕೊನೆಗಳಿಗೆಯಲ್ಲಿ ಮನಪರಿವರ್ತಿಸಿದರೂ ಸ೦ಶಯವಿಲ್ಲ.

ಬ್ರಹ್ಮಾವರ,ಬೈಕಾಡಿ,ಕಡೆಕಾರ್,ಪರ್ಕಳ,ಕಡಿಯಾಳಿ,ಕು೦ಬ್ರಕೋಡು,ಇ೦ದಿರನಗರ,ಕು೦ಜಿಬೆಟ್ಟು ಕಡೆಗಳಲ್ಲಿ ಜಿಡಿಎಸ್ ಪಕ್ಷದ ಅಭ್ಯರ್ಥಿ,ಕಾರ್ಯಕರ್ತರು ಮಿ೦ಚಿನ ಮತಬೇಟೆಯನ್ನು ಮು೦ದುವರಿಸಿದ್ದಾರೆ.

 

kiniudupi@rediffmail.com

No Comments

Leave A Comment