ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಕೆಮುತ್ತೂರು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ – ಸುವರ್ಣ ಪೂಜಾಸೇವಾ ಮೊಹೋತ್ಸವ ಅರ್ಚಕರಿಗೆ ಸನ್ಮಾನ
ಉಡುಪಿ ಸಮೀಪದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಕೆಮುತ್ತೂರಿನಲ್ಲಿ ಭಾನುವಾರದ೦ದು ದೇವಳದಲ್ಲಿ ಪ್ರಧಾನ ಅರ್ಚಕರಾಗಿ ನಿರಂತರವಾಗಿ ಸುಮಾರು 50 ವರ್ಷ ಗಳ ಕಾಲ ( ಸುವರ್ಣ ಪೂಜಾ ಸೇವಾ ಮೊಹೋತ್ಸವ ) ಪೂಜೆಯ ಸೇವೆ ಸಲ್ಲಿಸಿದ ವೇದಮೂರ್ತಿ ಸುಜಯ ಆಚಾರ್ಯ ಉದ್ಯಾವರರವರನ್ನು ದೇವಾಲಯ ಸಭಾ ವೇದಿಕೆಯಲ್ಲಿ ಗೌರವಿಸಿ ಅಭಿನಂದಿಸಲಾಯಿತು .
ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಹೂವಿನ ಅಲಂಕಾರ , ಸಾಮೂಹಿಕ ಪ್ರಾಥನೆ , ಗಣಹೋಮ , ಸತ್ಯನಾರಾಯಣ ಪೂಜೆ , ವಿವಿಧ ಭಜನಾ ಮಂಡಳಿಯ ವತಿಯಿಂದ ಬೆಳ್ಳಿಗೆಯಿಂದ ಸಂಜೆಯ ವರೆಗೆ ಭಜನಾ ಕಾರ್ಯಕ್ರಮ ,ಮಹಾ ಪೂಜೆ ದರ್ಶನ ಸೇವೆ -ಪ್ರಸಾದ ವಿತರಣೆ , ಸರ್ವ ಜನಿಕ ಅನ್ನಸಂತರ್ಪಣೆ ಹಾಗೂ ಭಾರತನಾಟ್ಯ ಕಾರ್ಯ ಕ್ರಮ ನೆಡೆಯಿತು.
ಧಾರ್ಮಿಕ ಸಭೆಯಲ್ಲಿ ವೇದ ಮೂರ್ತಿ ಗಣೇಶ್ ಭಟ್ ಕಾಪು , ವೇದಮೂರ್ತಿ ಕಮಲಾಕ್ಷ ಭಟ್ ಕಾಪು , ವೇದಮೂರ್ತಿ ರವೀಂದ್ರ ಭಟ್ ಶಿರ್ವ , ದರ್ಶನ ಪಾತ್ರಿ ಕೆ ರಮೇಶ ಕಾಮತ್ , ದೇವಳದ ಆಡಳಿತ ಮೊಕ್ತೇಸರಾದ ರಾಮದಾಸ ಕಾಮತ್ , ಆಡಳಿತ ಮಂಡಳಿಯ ಸದಸ್ಯರಾದ ಉಮೇಶ್ ಕಾಮತ್ , ವೆಂಕಟೇಶ ಕಾಮತ್ , ನರಹರಿ ಕಾಮತ್ , ವಿಠ್ಠಲದಾಸ ಕಾಮತ್ , ಅನಂತ ಕಾಮತ್ , ಪ್ರದೀಪ್ ಕಾಮತ್ , ವಸಂತ ಕಾಮತ್ , ಪದ್ಮನಾಭ ಕಾಮತ್ , ವಾಸುದೇವ ಕಾಮತ್ , ಜಿ ಎಸ್ ಬಿ ಮಹಿಳಾ,ಯುವಕ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.