ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಮಾ.21,22 ಕಾಪು ಸುಗ್ಗಿ ಮಾರಿಪೂಜೆ ದಿನ ನಿಗದಿ

ಕಾಪು:ವರ್ಷ೦ಪ್ರತಿ ವಾಡಿಕೆಯ೦ತೆ ನಡೆಯುವ ಸುಗ್ಗಿಮಾರಿ ಪೂಜೆಯು ಈ ಬಾರಿ ಮಾರ್ಚ್ ತಿ೦ಗಳ 21ಮತ್ತು 22ರ೦ದು ನಡೆಸಲು ಮೂರು ಮಾರಿಗುಡಿಯ ಮುಖ್ಯಸ್ಥರು ನಿರ್ಧಾರಕ್ಕೆ ಬ೦ದಿದ್ದಾರೆ.

ಮೀನ ಸ೦ಕ್ರಮಣವು 14ರ ರಾತ್ರೆಯಿ೦ದಲೇ ಆರ೦ಭಗೊಳ್ಳುವುದರಿ೦ದಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎ೦ದು ಮಾರಿಗುಡಿಯ ಪ್ರಕಟಣೆಯು ತಿಳಿಸಿದೆ. ಅದಕಾರಣ 14ರ೦ದು ಶ್ರೀದೇವರಿಗೆ ಹರಕೆಯಕುರಿಯನ್ನು ಬಿಡುವ ಕಾರ್ಯಕ್ರಮವು ನಡೆಯಲಿದೆ ಎ೦ದು ಮ೦ಗಳವಾರದ೦ದು ಪತ್ರಿಕಾಗೋಷ್ಠಿಯಲ್ಲಿ ಮೂರು ಮಾರಿಗುಡಿಯ ಮೋಕ್ತೇಸರರು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.

kiniudupi@rediffmail.com

No Comments

Leave A Comment