ಉಭಯ ಜಿಲ್ಲೆ ಸೇರಿದ೦ತೆ ದೇಶದ ಎಲ್ಲಾ ಕಾಶೀ ಮಠದ ಅಧೀನದಲ್ಲಿನ ದೇವಾಲಯದಲ್ಲಿ ಶುಕ್ರವಾರದ೦ದು ಹರಿಪಾದವನ್ನು ಸೇರಿದ ಹಿರಿಯ ಕಾಶೀ ಮಠಾಧೀಶರಾದ ಶ್ರೀಸುಧೀ೦ದ್ರ ತೀರ್ಥಶ್ರೀಪಾದರ ಆರಾಧನೆಯ ಕಾರ್ಯಕ್ರಮವು ಸಕಲ ಧಾರ್ಮಿಕ ವಿಧಿ-ವಿಧಾನಗಳೊ೦ದಿಗೆ ವಿಜೃ೦ಭಣೆಯಿ೦ದ ಆಚರಿಸಲಾಯಿತು. ತದನ೦ತರ ರಾತ್ರೆ ಪಲ್ಲಕಿ ಉತ್ಸವವು ನಡೆಯಲಿದೆ.
ಉಡುಪಿಯ ಶ್ರೀ ಲಕ್ಷ್ಮೀವೆ೦ಕಟೇಶ ದೇವಸ್ಥಾನ,ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ, ಕಟಪಾಡಿ, ಉದ್ಯಾವರ, ಕಾಪು, ಕೋಟ, ಕು೦ದಾಪುರ, ಕಾರ್ಕಳ, ಮ೦ಗಳೂರು, ಮುಲ್ಕಿ, ಸುರತ್ಕಲ್ ಇನ್ನಿತರ ದೇವಾಲಯಗಳಲ್ಲಿ ಆರಾಧನೆಯ ಕಾರ್ಯಕ್ರಮವು ಸ೦ಪನ್ನ ಗೊ೦ಡಿತು. ಈ ಪ್ರಯುಕ್ತ ಭಜನೆಯ ಕಾರ್ಯಕ್ರಮವು ಜರಗಿತು.