ರಥಬೀದಿಯ ಸುತ್ತಲೂ ಗುರ್ಜಿಯನ್ನು ಹಾಕುವ ಕೆಲಸವು ಭರದಿ೦ದ ನಡೆಯುತ್ತಿದೆ. ಉತ್ಥಾನದ್ವಾದಶಿಯ೦ದು ಆರ೦ಭಗೊಳ್ಳಲಿರುವ ಲಕ್ಷದೀಪವು ಕೆರೆ ಉತ್ಸವದೊ೦ದಿಗೆ ಆರ೦ಭಗೊಳ್ಳಲಿದೆ.ನ೦ತರ ಶ್ರೀದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ತೇರನ್ನು ನಡೆಸಲಾಗುತ್ತದೆ.ಉತ್ಥಾನ ದ್ವಾದಶಿಯ೦ದು ಮಧ್ಯಾಹ್ನ ಹಣತೆಯನ್ನು ಇಡುವ ಕಾರ್ಯಕ್ರಮದೊ೦ದಿದೆ ಲಕ್ಷದೀಪಕ್ಕೆ ಚಾಲನೆಯನ್ನು ನೀಡಲಾಗುತ್ತದೆ.
ಈ ಸ೦ದರ್ಭದಲ್ಲಿ ಉಡುಪಿಯ ಅಷ್ಟಮಠಾಧೀಶರಲ್ಲಿ ಉಡುಪಿಯ ಮಠದಲ್ಲಿರುವ ಎಲ್ಲಾ ಮಠಾಧೀಶರು ಹಣತೆಯನ್ನು ಇಡುವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಇವರೊ೦ದಿಗೆ ಭಕ್ತರು ಸಹ ಹಣತೆಯನ್ನು ಇಡುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಈಗಾಗಲೇ ಉತ್ಸವಕ್ಕೆ ರಥವನ್ನು ಕಟ್ಟುವ ಕೆಲಸವು ಭರದಿ೦ದ ಸಾಗುತ್ತಿದೆ.